19 ವರ್ಷದಿಂದ ಮದುವೆಯಾಗಿದ್ದ ಹೆಂಡ್ತಿ ಹೆಣ್ಣಲ್ಲ!

ಅಷ್ಟೇ ಏಕೆ, ಗಂಡು ಹೆಣ್ಣಾಗಬಹುದು, ಹೆಣ್ಣು ಗಂಡಾಗಬಹುದು. ಗಂಡು ಗಂಡನ್ನು ಮದುವೆಯಾಗುವುದು, ಹೆಣ್ಣು ಹೆಣ್ಣನ್ನು ಲಗ್ನವಾಗುವುದು, ಗಂಡು ಹೆಣ್ಣನ್ನು ವಿವಾಹವಾಗುವಷ್ಟೇ ಸಹಜವಾದ ವಿದ್ಯಮಾನ. ಆದರೆ, ತಾನು ಮದುವೆಯಾಗಿ ಸುಖ ಉಂಡಿರುವ ಆಕೃತಿ ಹೆಣ್ಣಲ್ಲ ಗಂಡು ಎಂದು ಹತ್ತೊಂಬತ್ತು ವರ್ಷಗಳ ನಂತರ ಗಂಡಿಗೆ ಗೊತ್ತಾದರೆ ಆತನಿಗೆ ಹೇಗಾಗಿರಬೇಡ.
ಆದರೆ ಇದು ವಿಸ್ಮಯವೂ ಅಲ್ಲ ಮಣ್ಣೂ ಅಲ್ಲ. ಹೆಣ್ಣೆಂಬ ಆ ಗಂಡಿನ ಭಂಡತನ. ತಮಾಷೆ ಅಂದ್ರೆ ಮದುವೆಯಾಗಿರುವ ಗಂಡಿಗೆ ಆ ವ್ಯಕ್ತಿ ಹೆಣ್ಣೆಂದು ಹತ್ತೊಂಬತ್ತು ವರ್ಷಗಳ ವರೆಗೂ ಗೊತ್ತಾಗಿರಲಿಲ್ಲ. ಆ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದಾಗಲೂ. ಸಂಪೂರ್ಣವಾಗಿ ಆ ವ್ಯಕ್ತಿ ಹೆಣ್ಣಿನಂತೆಯೇ ವರ್ತಿಸುತ್ತಿತ್ತು. ಆದರೆ, ಆ ವಿಚಿತ್ರ ಘಟನೆ ಸಂಭವಿಸುವವರೆಗೆ...
48 ವರ್ಷದ ಆ ವ್ಯಕ್ತಿ ಕೆಲದಿನಗಳಿಂದ ನೈಟ್ ಕ್ಲಬ್ಗೆ ಹೋಗಲು ಆರಂಭಿಸಿದಾಗ ಮತ್ತು ಕೆಲ ಗಂಡಸರಿಂದ ಮೇಲಿಂದ ಮೇಲೆ ಈಮೇಲ್ಗಳು ಪ್ರಾರಂಭಿಸಲು ಶುರುವಾದಾಗ ಗಂಡನಿಗೆ ಅನುಮಾನ ಕಾಡಲು ಆರಂಭಿಸಿದೆ. ಆಗ ಹೆಂಡತಿಯೆಂಬ ಆ ವ್ಯಕ್ತಿಯನ್ನು ಗೋಡೆಗೊತ್ತಿ ಹಿಡಿದು 'ನಿಜ ಹೇಳು, ನೀನು ಯಾರು, ಗಂಡೋ ಹೆಣ್ಣೋ' ಎಂದು ಪಕ್ಕಾ ಸಿನಿಮೀಯ ರೀತಿಯಲ್ಲಿ ಕೇಳಿದಾಗ ಸತ್ಯವೇನೆಂಬುದನ್ನು ಆತ ಬಾಯಿಬಿಟ್ಟಿದ್ದಾನೆ.
ತಾನು ಹುಟ್ಟಾ ಗಂಡು. ಆಪರೇಷನ್ ಮಾಡಿಸಿಕೊಂಡು ಹೆಣ್ಣಾಗಿ ಪರಿವರ್ತಿತಳಾದೆ. ಅಲ್ಲಿಂದ ಇಲ್ಲಿಯವರೆಗೆ ಹೆಣ್ಣಾಗಿಯೇ ಇದ್ದೇನೆ. ನಾನು ದೇವರಾಣೆ ನಿಮ್ಮ ಕೈಹಿಡಿದ ಹೆಂಡ್ತೀನೆ ಎಂದು ಗೋಗರೆದರೂ ಗಂಡ ಸ್ವೀಕರಿಸಲು ಒಪ್ಪಿಲ್ಲ. ಈ ವಿಷಯ ತಿಳಿದು ಆಕಾಶವೇ ಕಳಚಿಬಿದ್ದಂತಾಗಿದೆ. ಈ ರೀತಿ ಮೋಸ ಹೋಗುತ್ತೀನೆಂದು ಕನಸಿನಲ್ಲಿಯೂ ಕಲ್ಪಿಸಿರಲಿಲ್ಲ ಎಂದು ಗಂಡ ಗೋಳಾಡಿದ್ದಾನೆ.
ಈ ಮದುವೆ ಅಸಿಂಧುವಾಗಿದ್ದು ಅನೂರ್ಜಿತ ಮಾಡಬೇಕೆಂದು ಗಂಡ ಹೆಂಡತಿಯ ವಿರುದ್ಧ ಕೇಸ್ ಹಾಕಿದ್ದಾನೆ. ಹೆಂಡತಿಯೊಡನೆ ಜೀವಿಸಲು ಸಿದ್ಧವಿಲ್ಲ ಎಂದು ಗಂಡ ಹಠ ಹಿಡಿದಿದ್ದಾನೆ. ಸದ್ಯಕ್ಕೆ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ನ್ಯಾಯಾಲಯ ಇನ್ನೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ.
ಇದೆಲ್ಲ ಕಥೆ ಕೇಳಿದರೆ ಭಾರತದ ಕ್ರೀಡಾಪಟು ಪಿಂಕಿ ಕಥೆಯೇ ನೆನಪಾಗುತ್ತದೆ. ಪಿಂಕಿ ಕೂಡ ಹುಟ್ಟಾ ಗಂಡಾಗಿದ್ದು ಹೆಣ್ಣಾಗಿ ಪರಿವರ್ತಿತಳಾಗಿದ್ದಾಳೆ. ಆದರೆ, ಪಿಂಕಿ ತನ್ನ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ್ದಾಳೆಂದು ಆರೋಪ ಎದುರಿಸುತ್ತಿದ್ದಾಳೆ. ಈ ಪ್ರಪಂಚದಲ್ಲಿ ಇನ್ನೂ ಏನೇನು ನೋಡಬೇಕೋ?
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications