'ಲಜ್ಜಾ' ತಸ್ಲೀಮಾಗೆ ಒಂಟಿ ಬದುಕು ಸಾಕಾಯಿತಂತೆ

ಅಂದಹಾಗೆ 5 ವರ್ಷಗಳಿಂದ ಅವರು ದೆಹಲಿಯ ಅಜ್ಞಾತ ಸ್ಥಳದಲ್ಲಿ ನೆಲೆಸಿದ್ದಾರೆ. ಹಾಗಾಗಿ, ಇನ್ನೆಷ್ಟು ದಿನ ಈ ರೀತಿ ಬದುಕಲು ಸಾಧ್ಯ ಎಂದು ತಸ್ಲೀಮಾ ಹತಾಶೆ ವ್ಯಕ್ತಪಡಿಸಿದ್ದಾರೆ. 2007ರ ನ. 22ರಂದು, ಐದು ವರ್ಷ ಹಿಂದೆ ಮೂಲಭೂತವಾದಿಗಳ ಪ್ರತಿಭಟನೆಯ ನಂತರ ಒತ್ತಾಯದಿಂದಾಗಿ ತಮ್ಮ ಕೋಲ್ಕತ್ತಾ ತೊರೆದು ದೆಹಲಿಯಲ್ಲಿ ನೆಲೆಸಿದ್ದಾರೆ.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿರುವ ತಸ್ಲೀಮಾ ತಮ್ಮ ಒಂಟಿ ಜೀವನದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ:
ನಾನು ಮೂಲತಃ ಬಂಗಾಳಿಯವಳು. ಪಶ್ಚಿಮ ಬಂಗಾಳ ಸರಕಾರವು ನನಗೆ ಕೋಲ್ಕತ್ತಾದಲ್ಲಿ ತಂಗಲು ಅನುಮತಿ ನೀಡುವ ದಿನಕ್ಕಾಗಿ ಕಾಯುತ್ತಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಅಥವಾ ಬಾಂಗ್ಲಾದೇಶದಲ್ಲಷ್ಟೇ ನೆಲೆಸಬಲ್ಲೆ.
ಇವೆರಡನ್ನು ಹೊರತುಪಡಿಸಿ ಬೇರೆಲ್ಲೂ ನೆಲೆಸಲು ನನಗೆ ಸಾಧ್ಯವಿಲ್ಲ. ಆದರೆ ದುರದೃಷ್ಟವಶಾತ್ ಈಗ ನಾನು ಇಚ್ಛಿಸುವ ಎರಡೂ ಕಡೆ ನೆಲೆಸಲು ನನಗೆ ಅನುಮತಿ ಇಲ್ಲ. ಬೇರೆ ಯಾವುದೇ ಜಾಗ ನನಗೆ ಹೊಂದುವುದಿಲ್ಲ.
ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತ ಸ್ಥಳದಲ್ಲಿರುವಂತೆ ನನಗೆ ಸಲಹೆ ನೀಡಲಾಗಿದೆ. ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಲು ಸಾಮಾಜಿಕ ಜಾಲತಾಣವೊಂದೇ ನನಗೆ ಆಸರೆಯಾಗಿದೆ. ಟ್ವಿಟರ್ನಲ್ಲಿ ಸುಮಾರು 45,000 ಜನರ ಸಂವಾದ ಬಳಗವನ್ನು ಹೊಂದಿದ್ದೇನೆ.
ಕೋಲ್ಕತ್ತಾಕ್ಕೆ ಭೇಟಿ ನೀಡಲು ತಸ್ಲೀಮಾ ಸಲ್ಲಿಸಿರುವ ಮನವಿಗಳಿಗೆ ಪಶ್ಚಿಮ ಬಂಗಾಳ ಸ್ಪಂದಿಸಿಲ್ಲ. 5 ವರ್ಷಗಳ ಹಿಂದೆ ತಸ್ಲೀಮಾ ಅವರ ವೀಸಾ ನವೀಕರಿಸಿದಾಗ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದ ಕಾರಣ ಅವರನ್ನು ಕೋಲ್ಕತ್ತಾದಿಂದ ಕಳುಹಿಸಲಾಗಿತ್ತು. ತಮ್ಮ 'ಲಜ್ಜಾ' ಕಾದಂಬರಿ ವಿವಾದಕ್ಕೀಡಾದಾಗ 1994ರಲ್ಲಿ ತಸ್ಲೀಮಾ ತಾಯ್ನಾಡು ಬಾಂಗ್ಲಾವನ್ನು ತೊರೆಯಬೇಕಾಯಿತು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications