ಬಾಳಾ ಠಾಕ್ರೆ ಮೂಲತಃ ಮುಂಬೈವಾಲಾ ಅಲ್ಲ !

ಭೂಮಿ ಪುತ್ರ: ಈ ಸಂರ್ಭದಲ್ಲಿ, ಮುಂಬೈಕರ್ ಗಾಗಿ ಮಿಡಿಯುತ್ತಿದ್ದ ಕಟ್ಟರ್ ಬಾಳಾ ಠಾಕ್ರೆ ಸ್ವತಃ ಮಹಾರಾಷ್ಟ್ರ ಮೂಲದವರಾಗಿದ್ದರೇ? ಎಂಬ ಅನುಮಾನ ಈಗ ಕಾಡುತ್ತಿದೆ. ಭಾರತದ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಖಂಡೇಯ ಖಟ್ಜು ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ Hindu ಪತ್ರಿಕೆಯ ಸಂಪಾದಕೀಯದಲ್ಲಿ ಖಟ್ಜು ಹೀಗೆ ಹೇಳಿದ್ದಾರೆ: ಶಿವಸೇನೆಯ ಮುಖ್ಯಸ್ಥನ ಸಿದ್ಧಾಂತ ಪ್ರಾದೇಶಿಕತೆಗೆ ಮಣೆ ಹಾಕುವುದು. ಅವರು ಅತ್ಯಂತ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದ್ದ 'ಭೂಮಿ ಪುತ್ರ' ನೀತಿಯ ಪ್ರಕಾರ ಕೇವಲ ಮಹಾರಾಷ್ಟ್ರದವರಿಗೆ ಮಾತ್ರವೇ ಉದ್ಯೋಗಾವಕಾಶ ಲಭಿಸಬೇಕು.
ಮೂಲತಃ ಭಾರತ ವಲಸಿಗರ ದೇಶ. ಇಲ್ಲಿನ ಜನ ಒಂದು ಕಡೆ ನೆಲೆ ನಿಂತವರಲ್ಲ. ಇಲ್ಲಿಂದಲ್ಲಿಗೆ ಅಲ್ಲಿಂದ ಇಲ್ಲಿಗೆ ವಲಸೆ ಹೋಗಿ ವಾಸ್ತವ್ಯ ಬದಲಿಸುತ್ತಾ ಅದನ್ನೇ ತ,ಮ್ಮ ಕರ್ಮಭೂಮಿ ಎಂದು ಪರಿಗಣಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ನಿಜವಾದ ಭೂಮಿಪುತ್ರರು ಅಂದರೆ ದ್ರಾವಿಡರಿಗಿಂತ ಮುಂಚಿನವರು. ಇವರನ್ನು ಆದಿವಾಸಿಗಳು ಎಂದೂ ಗುರುತಿಸಲಾಗುತ್ತದೆ, ಅಂದರೆ ಬಿಲ್ಲವರು, ಗೊಂಡಾಗಳು, ಸಂತಲರು, ತೋಡಾಗಳು ಹೀಗೆ ಇನ್ನೂ ಹಲವರು. ಇಂದಿನ ಜನಸಂಖ್ಯೆಯಲ್ಲಿ ಈ ಮೂಲವಾಸಿಗಳ ಸಂಖ್ಯೆ ಶೇ. 7-8 ಇರಬಹುದಷ್ಟೇ.
ಪರಿಸ್ಥಿತಿ ಹೀಗಿರುವಾಗ ಠಾಕ್ರೆ ಕುಟುಂಬವೂ ಸೇರಿದಂತೆ ಈಗಿರುವ ಶೇ. 92ರಷ್ಟು ಮಹಾರಾಷ್ಟ್ರಿಗರು ಮೂಲತಃ ಮಹಾರಾಷ್ಟ್ರಿಗರು ಅಲ್ಲ. ಅವರೆಲ್ಲ ಹೊರಗಿನವರೇ! ಶೇ. 7-8 ರಷ್ಟಿರುವ ಬಿಲ್ಲವರು ಮತ್ತಿತರ ಬುಡಕಟ್ಟಿನವರು ಮೂಲ ಮಹಾರಾಷ್ಟ್ರಿಗರು ಎಂದು ಖಚಿತವಾಗಿ ಹೇಳಬಹುದು.
ಅಷ್ಟೇ ಅಲ್ಲ. ಶಿವಸೇನೆ ಮತ್ತು ಬಾಳಾ ಠಾಕ್ರೆಯ ರಾಜಕೀಯ ನಿಲುವು ಸಾಂವಿಧಾನಿಕ ಹಕ್ಕಿಗೆ ಚ್ಯುತಿ ತರುವಂತಹುದು ಎನ್ನುತ್ತಾರೆ ಸುಪ್ರೀಂಕೋರ್ಟಿನ ನಿವೃತ್ತ ಜಡ್ಜ್. ಈಗಿನ ದಿನಮಾನದಲ್ಲಿ ಅಗತ್ಯವಿರುವದು ಐಕ್ಯತೆಯ ಮಂತ್ರ ಎಂಬುದನ್ನು ಎಲ್ಲರೂ ಅರಿಯಬೇಕು ಎಂದೂ ಖಟ್ಜು ಕಿವಿಮಾತು ಹೇಳಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications