ಚುನಾವಣೆಗೆ 170 ದಿನ ಬಾಕಿ ಆದ್ರೂ ನಿಂತಿಲ್ಲ ಭಿನ್ನಮತ

170-days-to-go-assembly-election-kpcc-g-parameshwar
ಬೆಂಗಳೂರು,ನ.14: ಬೂದಿಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿರತುವ ಕಾಂಗ್ರೆಸ್ ಭಿನ್ನಮತ ಮೂರಾಬಟ್ಟೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೇ ಇದನ್ನು ಒಪ್ಪಿಕೊಂಡಿದ್ದು, ನಿಮ್ಮ ಶತ್ರು ನಾನಲ್ಲ- ಬದಲಿಗೆ BJP ಮತ್ತು JDS ಎಂಬುದನ್ನು ಅರಿತುಕೊಳ್ಳೀ ಎಂದು ಕಚ್ಚಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿಳಿಯ ಹೇಳಿದ್ದಾರೆ.

Interesting ಅಂದರೆ ಯಡಿಯೂರಪ್ಪ KJP ಕಾಂಗ್ರೆಸ್ ಜತೆ ಕೈಜೋಡಿಸಲಿದೆ ಎಂಬ ಸುದ್ದಿಗೆ ಪುಷ್ಠಿ ನೀಡುವಂತೆ ಡಾ. ಜಿ. ಪರಮೇಶ್ವರ್ ಅವರು ಅಪ್ಪಿತಪ್ಪಿಯೂ ಯಡಿಯೂರಪ್ಪ KJP ಬಗ್ಗೆ ಹೇಳಿಲ್ಲ. ಬದಲಿಗೆ BJP ಮತ್ತು JDS ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ.

ಪರಮೇಶ್ವರಗೆ ದೀಪಾವಳಿ ದಿನ ಜ್ಞಾನದ ಬೆಳಕು:
ನಿಮ್ಮ ಶತ್ರು ಪರಮೇಶ್ವರ್ ಅಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ವಿಧಾನಸಭೆ ಚುನಾವಣೆಗೆ ಇನ್ನು 170 ದಿನಗಳಷ್ಟೇ ಬಾಕಿಯಿದೆ. ಆದರೆ ನಮ್ಮಲ್ಲಿ ಭಿನ್ನಮತ ಮಾತ್ರ ಇನ್ನೂ ನಿಂತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಚುನಾವಣೆ ಎದುರಿಸುವುದು ಹೇಗೆ? ಎಂದು ಭಿನ್ನಮತದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಪರಮೇಶ್ವರ್, ಯಾವ ಲೆಕ್ಕಾಚವಾರದಲ್ಲಿ ಈ 170 ದಿನ fix ಮಾಡಿದ್ದಾರೋ ಅವರೇ ವಿವರಿಸಬೇಕು. ಇಂದು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಪರಮೇಶ್ವರ್ ಈ ಅತಂಕ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+