ಭ್ರಷ್ಟಾಚಾರ: ಅರವಿಂದ್ ಕೇಜ್ರಿವಾಲಾ ಸುದ್ದಿಗೋಷ್ಠಿ ವಿವರ

ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಯುತ್ತಿರುವ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:
ಅರವಿಂದ್ ಕೇಜ್ರಿವಾಲಾ ಅವರ ಆರು ಬೇಡಿಕೆಗಳು:
1. HSBC ಉನ್ನತಾಧಿಕಾರಿಗಳನ್ನು ಬಂಧಿಸಿ.
2. HSBC ಬ್ಯಾಂಕಿನ ಭಾರತೀಯ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು
3. 700 ಸ್ವಿಸ್ ಬ್ಯಾಂಕ್ ಖಾತೆಗಳ ವಿವರವನ್ನು ಭಾರತ ತಕ್ಷಣ ಪಡೆಯಬೇಕು.
4. ಸ್ವಿಸ್ ಬ್ಯಾಂಕ್ ಖಾತಾದಾರರು ತಮ್ಮ ಆದಾಯದ ಮೂಲಗಳನ್ನು ಘೋಷಿಸಬೇಕು.
5. 700 ಸ್ವಿಸ್ ಬ್ಯಾಂಕ್ ಖಾತಾದಾರರ ಮೇಲೆ ತನಿಖೆ ನಡೆಯಬೇಕು.
6. ಮೇಲ್ನೋಟಕ್ಕೆ ಯಾರೆಲ್ಲ ತಪ್ಪಿತಸ್ಥರೆಂದು ಕಂಡುಬಂದಿದ್ದಾರೋ ಅವರನ್ನೆಲ್ಲ ಬಂಧಿಸಿ.
* ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸ್ವಿಸ್ ಬ್ಯಾಂಕಿನಲ್ಲಿ ತಲಾ 100 ಕೋಟಿ ರೂ ಇಟ್ಟಿದ್ದಾರೆ.
* HSBC ಬ್ಯಾಂಕಿನ ಜಿನಿವಾ ಶಾಖೆಯ ಉನ್ನತಾಧಿಕಾರಿಯ ಹೆಸರು ಮೊಬೈಲ್ ಸಂಖ್ಯೆ ಬಿಡುಗಡೆ. ಈತನ ಬಳಿ ಕಪ್ಪು ಹಣ ಅಪಾರ ಪ್ರಮಾಣದಲ್ಲಿದೆ. HSBC ಬ್ಯಾಂಕಿನ ಜಾತಕವನ್ನು ತೆರೆದಿಡುತ್ತಿರುವ ಅರವಿಂದ್.
* ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿರುವ 700 ಮಂದಿಯ ವಿವರ ಸರಕಾರದ ಬಳಿಯಿದೆ. ಆದರೆ ಇದುವರೆಗೂ ಕೇವಲ 170 ಮಂದಿಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ಕೈತೊಳೆದುಕೊಂಡಿದೆ.
* ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರು 25 ಲಕ್ಷ ಕೋಟಿ ರೂಪಾಯಿ ಇಟ್ಟಿದ್ದಾರೆ.
* ಆದಾಯ ತೆರಿಗೆ ಇಲಾಖೆಯ (IRS) ಮಾಜಿ ಅಧಿಕಾರಿ ಸಂದೀಪ್ ಟಂಡನ್ ಮತ್ತು ಅವರ ಪತ್ನಿ ಅನು ಟಂಡನ್ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 250 ಕೋಟಿ ರೂ. ಕಪ್ಪು ಹಣ ಇಟ್ಟಿದ್ದಾರೆ.
* ಅನು ಟಂಡನ್ ಈಗ ಕಾಂಗ್ರೆಸ್ ಸಂಸದೆ. ಅದಕ್ಕೂ ಮುನ್ನ one fine day ಆಕೆಯ ಪತಿರಾಯ IRS ಅಧಿಕಾರಿ ಸಂದೀಪ್ ಟಂಡನ್ ಮುಕೇಶ್ ಅಂಬಾನಿಯ RIL ಮೇಲೆ ದಾಳಿ ನಡೆಸಿದ್ದರು. ಅದಾದ ನಂತರ ಅವರು ಮುಕೇಶ್ ಗೆ ತುಂಬಾ ಖಾಸಾ ವ್ಯಕ್ತಿಯಾಗಿಬಿಟ್ಟರು. ಅದಾದ ನಂತರ ಇಲಾಖೆಯಿಂದ ನಿವೃತ್ತಿ ಪಡೆದು RILನಲ್ಲಿ ದುಡಿಯತೊಡಗಿದರು.
* ಜೆಟ್ ಏರ್ ವೇಸ್ ಕಂಪನಿಯ ನರೇಶ್ ಗೋಯಲ್ ಸಹ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಕಪ್ಪು ಹಣ ಇಟ್ಟಿದ್ದಾರೆ.
* ಬರ್ಮನ್ ಸೋದರರು, ಯಶೋವರ್ಧನ ಬಿರ್ಲಾ ಮುಂತಾದವರ ಮೇಲೂ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಬೇಕು.












Click it and Unblock the Notifications