ಅಂತರ್ಜಾತಿ ವಿವಾಹ ಬಂಧನಕ್ಕೆ 53 ಲಕ್ಷ ರೂ. ಬಹುಮತಿ

ಮಹಾರಾಷ್ಟ್ರದ ಸಮಾಜ 'ಕಲ್ಯಾಣ' ಇಲಾಖೆಯು ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಅವಧಿಯಲ್ಲಿ 123 ಜೋಡಿಗಳು ಸತಿಪತಿಗಳಾಗಿದ್ದಾರೆ. ಇಲಾಖೆಯ ವತಿಯಿಂದ ಈ ದಂಪತಿಗೆ ಒಟ್ಟು 53 ಲಕ್ಷ ರೂಪಾಯಿ ಸಂದಾಯವಾಗಿದೆ.
2010ರ ಮುನ್ನ 24 ಜೋಡಿಗಳು ಸತಿಪತಿಗಳಾಗಿದ್ದಾರೆ. ತಲಾ ಜೋಡಿಗೆ 15 ಸಾವಿರ ಸಂದಾಯವಾಗಿದೆ. ತದನಂತರ, 2010ರ ಫೆಬ್ರವರಿಯಲ್ಲಿ ಮತ್ತಷ್ಟು ಸಕ್ರಿಯವಾದ ಇಲಾಖೆಯು ಯೋಜನೆಗೆ ತಿದ್ದುಪಡಿ ತಂದಿತು. ಅಲ್ಲಿಂದೀಚೆಗೆ 99 ಜೋಡಿಗಳು ಸಪ್ತಪದಿ ತುಳಿದವು. ಇದರಿಂದ ಜೋಡಿಗೆ ತಲಾ 50 ಸಾವಿರ ರೂ. ವಿತರಿಸಲಾಯಿತು.
ಅಂದಹಾಗೆ ಯೋಜನೆಗೆ ರಾಜ್ಯ ಸರಕಾರ ಶೇ. 50ರಷ್ಟು ಹಣ ನೀಡಿದರೆ ಕೇಂದ್ರವು ಉಳಿದ ಮೊತ್ತವನ್ನು ವಿತರಿಸುತ್ತದೆ. ಅಂದಹಾಗೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗ ಅಥವಾ ಅಲೆಮಾರಿ ಜನಾಂಗದ ವ್ಯಕ್ತಿಯನ್ನು ಹಿಂದೂ/ಬ್ರಾಹ್ಮಣ/ಲಿಂಗಾಯತ/ಜೈನ್ ಅಥವಾ ಸಿಖ್ ಸಮುದಾಯದ ವ್ಯಕ್ತಿಯನ್ನು ಮದುವೆಯಾದರೆ ಈ ಯೋಜನೆಯ ಫಲಾನುಭವಿಗಳಾಗಬಹುದು. ಅಂತಹ ದಂಪತಿಗೆ ಯೋಜನೆಯ ಧನ ಸಹಾಯ ಪ್ರಾಪ್ತಿಯಾಗುತ್ತದೆ.
ಮದುವೆ ಪ್ರಮಾಣ ಪತ್ರ, ವ್ಯಾಸಂಗದ ಪತ್ರ, ಮದುವೆ ಫೋಟೋ, ಸ್ಥಳೀಯ ಜನಪ್ರತಿನಿಧಿಯಿಂದ ಪತ್ರ, ಜಂಟಿ ಬ್ಯಾಂಕ್ ಖಾತೆ ವಿವರ, ರೇಶನ್ ಕಾರ್ಡ್ ಪ್ರತಿಯನ್ನು ಸೂಕ್ತ ಅರ್ಜಿಯೊಂದಿಗೆ ಇಲಾಖೆಗೆ ಸಲ್ಲಿಸಬೇಕು.
ಈ ರೀತಿ ಅರ್ಜಿ ಗುಜರಾಯಿಸಿ 6 ತಿಂಗಳಲ್ಲಿ ಮದುವೆ ಬಹುಮತಿ ಹಣ ದಂಪತಿಗೆ ಸಂದಾಯವಾಗುತ್ತದೆ. ಆದರೆ ಇದು ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದವರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನೂ ಅನೇಕ ದಂಪತಿಗೆ ಈ ಯೋಜನೆ ಅರಿವಿಗೆ ಬಂದಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications