ಸರ್ಕಾರದಿಂದ ಅನ್ಯಾಯ, ಶೆಟ್ಟರ್ ರಾಜೀನಾಮೆಗೆ ಆಗ್ರಹ

ಶೆಟ್ಟರ್ ಅವರೇ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದಿದ್ದ ನಿಮ್ಮನ್ನು ಹೀರೋ ಎಂದುಕೊಂಡಿದ್ದೆವು. ಅದರೆ, ಪೊಲೀಸ್ ರಾಜ್ಯ ನಡೆಸುತ್ತಿದ್ದಿರಾ.. ನೀವು ಏನ್ನನ್ನೂ ಹೇಳುವುದು ಬೇಡ. ನನ್ನನ್ನು ಕನ್ವಿಂನ್ಸ್ ಮಾಡಲು ಬರಬೇಡಿ, ನೀರು ಬಿಟ್ಟು ಅನ್ಯಾಯ ಮಾಡಿದ್ದೀರಾ. ಜೈಲಿಗೆ ಹೋಗಲು ನಾವು ಸಿದ್ಧ ಎಂದು ಮಾದೇಗೌಡ ಅವರು ಹೇಳಿದ್ದಾರೆ.
ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ಬಂದ್ ಮಾಡಲಾಗಿದ್ದು, ತಮಿಳು ಪತ್ರಿಕೆಗಳನ್ನು ಸುಟ್ಟು ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೇಲುಕೋಟೆ ಶಾಸಕ ಪುಟ್ಟರಾಜು ನೇತೃತ್ವದಲ್ಲಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ಜಾರಿಯಲ್ಲಿದೆ.
ಮಂಡ್ಯ ನಗರ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯತ್ಕಪಡಿಸಿದ್ದಾರೆ. 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಲ್ಲೆಡೆ ಪ್ರತಿಭಟನೆ: ಈ ನಡುವೆ ಬೆಂಗಳೂರಿನಲ್ಲಿ ರಾಜಭವನದ ಮುಂದೆ ಕಪ್ಪುಬಾವುಟ ಪ್ರದರ್ಶಿಸಲು ಹೊರಟಿದ್ದ ಕನ್ನಡ ಕ್ರಿಯಾ ಸಮಿತಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಉಪ ನಗರ ಗಣಪತಿ ದೇವಾಲಯದಿಂದ
ಮೈಸೂರು ನಂಜನಗೂಡು ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಲಾಗಿದೆ. ಮಂಡ್ಯದಲ್ಲಿ ಬಸ್, ರೈಲು ತಡೆದು ಪ್ರತಿಭಟನೆ ನಡೆಸಲು ಕರವೇ ಸಿದ್ಧತೆ ನಡೆಸಿದೆ.
ರಾಮದಾಸ್ ಸಮರ್ಥನೆ: ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ಮೇಲೆ ಕಾನೂನು ತಜ್ಞರೊಡನೆ ಸಮಾಲೋಚನೆ ನಡೆಸಿ ಕಾವೇರಿ ನೀರನ್ನು ತಮಿಳುನಾಡು ಕಡೆಗೆ ಹರಿಸಲಾಗಿದೆ. ಸೋಮವಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಲಾಗುವುದು.
ಸರ್ವಪಕ್ಷಗಳ ಸಭೆ ನಂತರ ಶನಿವಾರ ರಾತ್ರಿ 10 ಗಂಟೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು. ಅದರೆ, ಅವರಿಂದ ಸಕಾರಾತ್ಮಕ ಉತ್ತರ ಬರದಿದ್ದ ಹಿನ್ನೆಲೆ ನೀರು ಬಿಡಬೇಕಾಯಿತು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಹೇಳಿದ್ದಾರೆ.












Click it and Unblock the Notifications