ಯುಎಸ್ ವೀಸಾ ವಿತರಣೆ ಇನ್ಮುಂದೆ ವಿಳಂಬ

ಒಂದು ದಿನದಲ್ಲಿ ಮುಗಿಯುತ್ತಿದ್ದ ವೀಸಾ ಪ್ರಕ್ರಿಯೆಗಳನ್ನು ಇನ್ನು ಎರಡು ದಿನದಲ್ಲಿ ಸಂಪೂರ್ಣ ಗೊಳಿಸಲಾಗುವುದು. ವೀಸಾ ವಿತರಣೆ ಪ್ರಕ್ರಿಯೆ ಕ್ರಮಬದ್ದವಾಗಿ ಮತ್ತು ಸರಳೀಕರಣವಾಗಿರಲು ಈ ಬದಲಾವಣೆಯನ್ನು ಬುಧವಾರದಿಂದ (ಸೆ 26) ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ರಾಯಭಾರಿ ಕಚೇರಿಗೆ ಹಾಜರಾಗಲು ನಿಗದಿಯಾದ ಮೊದಲ ದಿನದಂದು ಫೋಟೋಗ್ರಾಫ್ ಮತ್ತು ಫಿಂಗರ್ ಪ್ರಿಂಟ್ ತೆಗೆಯಲಾಗುವುದು. ಎರಡನೇ ದಿನ ಸಂದರ್ಶನ ಪ್ರಕ್ರಿಯೆ ನಡೆಯಲಿದೆ ಎಂದು ದೂತಾವಾಸ ಕಚೇರಿಯ ಲೌರೆನ್ ಆರ್ಮಿನ್ಸಿ ಹೇಳಿಕೆ ನೀಡಿದ್ದಾರೆ.
ಎರಡು ದಿನ ವಿಸ್ತರಿಸುವುದರಿಂದ ವೀಸಾ ಆಸಕ್ತರಿಗೆ ಅನುಕೂಲವಾಗಾಲಿದೆ. ಈ ಎರಡು ದಿನಗಳಲ್ಲಿ ದಿನಾ ಕೇವಲ ಒಂದು ಗಂಟೆ ಕೆಲಸ ಮಾತ್ರವಿರುತ್ತದೆ. ಈ ಹಿಂದೆ ಇಡೀ ದಿನ ಕಾಯಬೇಕಿತ್ತು. ವೀಸಾ ಆಸಕ್ತರು ಇನ್ನು ಮುಂದೆ ಕಾಲ್ ಸೆಂಟರ್ ಗೆ ಕರೆ ಮಾಡಿ ಕಚೇರಿಗೆ ಹಾಜರಾಗಲು ದಿನ ನಿಗದಿ ಪಡಿಸಿಕೊಳ್ಳಬಹುದು.
ಹೈದರಾಬಾದ್ ನಗರದ ಜೊತೆ ನೋಯ್ಡಾ ನಗರದಲ್ಲೂ ಕಾಲ್ ಸೆಂಟರ್ ತೆರೆಯಲಾಗಿದೆ. ಹಿಂದಿ, ಇಂಗ್ಲಿಷ್, ಪಂಜಾಬಿ, ಗುಜರಾತಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ವ್ಯವಹರಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ ಎಂಟರವರೆಗೆ ಮತ್ತು ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಾಲ್ ಸೆಂಟರ್ ತೆರೆದಿರುತ್ತದೆ ಎಂದು ಲೌರೆನ್ ಆರ್ಮಿನ್ಸಿ ಹೇಳಿಕೆ ನೀಡಿದ್ದಾರೆ.
ಕಾಲ್ ಸೆಂಟರ್ ನಂಬರ್ (ಭಾರತ) : 91 -120 -660 -2222 ಮತ್ತು 91 -22 -6720 -9400
ಭಾರತದಲ್ಲಿರುವ ಅಮೇರಿಕಾ ದೂತಾವಾಸ ಕಚೇರಿಯ ದೂರವಾಣಿ ಸಂಖ್ಯೆ:
ನವದೆಹಲಿ: 011-91-11-2347 2000
ಕೋಲ್ಕತ್ತಾ: 011-91-33-3984 2400
ಚೆನ್ನೈ: 011-91-44-2857 4000
ಮುಂಬೈ: 011-91-22-2672 4000
ಹೈದರಾಬಾದ್: 011-91-40-4033 8300
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications