'ಕರ್ನಾಟಕದ ವಾಜಪೇಯಿ ಯಡಿಯೂರಪ್ಪ' ಈಗೆಲ್ಲಿದ್ದಾರೆ?

ಎಲ್ಲೂ ಇಲ್ಲ. ಅತ್ತ ಹೈಕಮಾಂಡ್ ತಮ್ಮನ್ನಾಗಲಿ ಅಥವಾ ತಮ್ಮಾಪ್ತರನ್ನಾಗಲಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದಿಲ್ಲ ಎಂಬುದರ ವಾಸನೆ ಬಡಿದಿದ್ದು, ಯಡಿಯೂರಪ್ಪನವರು ಶಾಂತಿ ಮಂತ್ರ ಪಠಿಸುತ್ತಾ ನಗರದ ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮ ಸೇರಿಕೊಂಡಿದ್ದಾರೆ.
ಆರ್ಟ್ ಆಫ್ ಲಿವಿಂಗ್ ನಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ರಾಜಕೀಯ ಆಯಾಸವನ್ನು ಪರಿಹರಿಸಿಕೊಳ್ಳಲು ಯಡಿಯೂರಪ್ಪ ನಿನ್ನೆ ಕನಕಪುರದತ್ತ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಆರೈಕೆ ಮಾಡಿಕೊಳ್ಳುತ್ತಾ, ರವಿಶಂಕರ್ ಗುರೂಜಿಯ ಆಶೀರ್ವಾದ ಪಡೆಯುತ್ತಾ ತಮ್ಮ ವಿರುದ್ಧ ಗರಂ ಆಗಿರುವ ಪಕ್ಷದ ಹೈಕಮಾಂಡ್ ಮಂದಿಯನ್ನು ಸ್ವಲ್ಪ ತಣ್ಣಗೆ ಮಾಡುವುದು ಯಡಿಯೂರಪ್ಪನವರ ದೂರಗಾಮಿ ಆಲೋಚನೆಯಾಗಿದೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರವಿಶಂಕರ್ ಗುರೂಜಿ, ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪ ನಡುವಣ ಕಂದಕವನ್ನು ಕಡಿಮೆ ಮಾಡಲು ಕೈಹಾಕಿದ್ದಾರೆ. ನಿನ್ನೆ Sri Sri College of Ayurvedic Science and Research Hospitalಗೆ ದಾಖಲಾಗುತ್ತಿದ್ದಂತೆ ಸುಮಾರು ಹೊತ್ತು ಇಬ್ಬರೂ ಚರ್ಚೆ ನಡೆಸಿದ್ದಾರೆ ಎಂದು ಕನಕಪುರದಿಂದ ಕೇಳಿಬಂದಿದೆ.
ಕನಕಪುರದ ಮಂದಿ ಏನನ್ನುತ್ತಾರೆ?: ದೈಹಿಕ ದಣಿವಾರಿಸಿಕೊಳ್ಳಲು ಸಾಮಾನ್ಯವಾಗಿ ನೆಲಮಂಗಲ ಅಥವಾ ಆನೇಕಲ್ ನತ್ತ ಹೊರಡುವ ಮಾಜಿ ಸಿಎಂ ಈ ಬಾರಿ ರವಿಶಂಕರ್ ಗುರೂಜಿ ಪಾದತಲ ಸೇರಿಕೊಂಡಿರುವುದನ್ನು ನೋಡಿದರೆ ಯಡಿಯೂರಪ್ಪನವರ ಸ್ಥಿತಿ ಶೋಚನೀಯವಾಗಿದೆ ಎನಿಸುತ್ತದೆ. ಪಕ್ಷ ಈ ಬಾರಿ ಯಡಿಯೂರಪ್ಪ ವಿಷಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಖಚಿತವೆನ್ನಲಾಗಿದೆ. ಹಾಗಾಗಿ, ರವಿಶಂಕರ್ ಗುರೂಜಿ ಅವರ art of politicsಗೆ ಮೊರೆಹೋಗಿದ್ದಾರೆ ಎಂದು ಕನಕಪುರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಇಂದಿನಿಂದ ಮೂರು ದಿನಗಳ ಕಾಲ ಹರಿಯಾಣದ ಸೂರಜ್ ಕುಂಡ್ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ರಾಷ್ಟ್ರೀಯ ಪರಿಷತ್ತಿನ ಸಭೆ ನಡೆಯುತ್ತಿದ್ದು, ಯಾವುದೇ ಕ್ಷಣ ಹೊಸ ಅಧ್ಯಕ್ಷರ ಹೆಸರು ಬಹಿರಂಗವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications