Get Updates
Get notified of breaking news, exclusive insights, and must-see stories!

ಗಣೇಶ ವಿಸರ್ಜನೆ ಅನುಕೂಲಕ್ಕೆ ಸಂಚಾರಿ ವಾಹನ

Ganesh Festival Bangalore
ಬೆಂಗಳೂರು, ಸೆ.18: ಗಣೇಶ ಹಬ್ಬದ ಆಚರಣೆಯಿಂದ ಉಂಟಾಗುವ ಜಲ ಮಾಲಿನ್ಯ ತಡೆಗಟ್ಟಲು ಸಂಚಾರಿ ಗಣೇಶ ವಿಸರ್ಜನಾ ವಾಹನಗಳನ್ನು ಸಜ್ಜುಗೊಳಿಸಲಾಗಿದೆ.ಸಾರ್ವಜನಿಕರು ಹೆಚ್ಚೆಚ್ಚು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಖರೀದಿಸಿದರೆ ಒಳ್ಳೆಯದು ಎಂದು ಮೇಯರ್ ವೆಂಕಟೇಶ್ ಮೂರ್ತಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ನಗರದ ವಿವಿಧ ಬಡಾವಣೆಗಳಲ್ಲಿ ಸೆ.19ರ ಸಂಜೆಯಿಂದ ರಾತ್ರಿಯವರೆಗೆ ಗಣೇಶ ವಿಸರ್ಜನೆಗೆಂದು ಸಂಚಾರಿ ವಾಹನದ ಸೇವೆ
ಒದಗಿಸುತ್ತಿದೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಂಡಳಿ ಮನವಿ ಮಾಡಿದೆ.

* ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಸಂಜೆ 5 ರಿಂದ 7, ಜಯನಗರ 4ನೇ ಹಂತದ ಪೊಲೀಸ್ ಠಾಣೆ ಬಳಿ ಸಂಜೆ 7.15 ರಿಂದ ರಾತ್ರಿ 10ರ ತನಕ ಸಂಚಾರಿ ಗಣೇಶ ವಿಸರ್ಜನಾ ವಾಹನ ಲಭ್ಯವಿದೆ.
* ಬೆಂಗಳೂರು ಪೂರ್ವ ವಿಭಾಗದಲ್ಲಿ ಸಂಜೆ 4ರಿಂದ 7.45,
* ಜೀವನ್‌ಭೀಮಾನಗರ ಪೊಲೀಸ್ ಠಾಣೆ ಬಳಿ ಸಂಜೆ 8 ರಿಂದ 10 ರವರೆಗೆ
* ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಸಂಜೆ 3 ರಿಂದ 6,
* ಮಲ್ಲೇಶ್ವರ ಪೊಲೀಸ್ ಠಾಣೆ ಬಳಿ ಸಂಜೆ 6 ರಿಂದ 6.30 ರವರೆಗೆ,
* ಮಲ್ಲೇಶ್ವರ 13 ನೆ ಅಡ್ಡರಸ್ತೆಯಲ್ಲಿ ಸಂಜೆ 6.30 ರಿಂದ 7.30
* ಮಲ್ಲೇಶ್ವರ 18ನೆ ಅಡ್ಡ ರಸ್ತೆ ಬಳಿ ಸಂಜೆ 7.30 ರಿಂದ ರಾತ್ರಿ 10 ರ ತನಕ ಸೇವೆ ಲಭ್ಯವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+