ಬಿಎಂಟಿಎಫ್ ಶರ್ಮ ವರ್ಗ ರದ್ದು, ಸರ್ಕಾರಕ್ಕೆ ಗುದ್ದು

CAT relief to BMTF Sharma
ನವದೆಹಲಿ, ಸೆ.7: ಬಿಎಂಟಿಎಫ್ ಮುಖ್ಯಸ್ಥ ಆರ್ ಪಿ ಶರ್ಮಾ ಅವರ ವರ್ಗಾವಣೆಯನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಶುಕ್ರವಾರ(ಸೆ.7) ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಆರ್ ಪಿ ಶರ್ಮಾ ಅವರ ವರ್ಗಾವಣೆ ಕಾನೂನಿಗೆ ವಿರುದ್ಧವಾದುದು ಎಂದು ಸಿಎಟಿ ಸಮಿತಿ(ಬೆಂಗಳೂರು ವಿಭಾಗ) ಸದಸ್ಯ ಕೆಬಿ ಸುರೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್ ಪಿ ಶರ್ಮಾ ಅವರು ಬಿಎಂಟಿಎಫ್ ಮುಖ್ಯಸ್ಥರಾಗಿ ಅಧಿಕಾರ ಅವಧಿ ಪೂರ್ಣಗೊಳಿಸಬೇಕು. ಶರ್ಮಾ ಅವರ ವರ್ಗಾವಣೆಗೆ ಸರ್ಕಾರ ಯಾವ ಮಾನದಂಡ ಅನುಸರಿಸಿದೆ ತಿಳಿಯುತ್ತಿಲ್ಲ ಎಂದು ಸುರೇಶ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಿಎಟಿ ನ್ಯಾಯಮಂಡಳಿ ನೀಡಿರುವ ಈ ತೀರ್ಪಿನಿಂದ ಕರ್ನಾಟಕ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ. ಬಿಬಿಎಂಪಿ ಇಂಜಿನಿಯರ್ ಗಳ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಬಹುಕೋಟಿ ಹಗರಣವನ್ನು ಶರ್ಮ ಅವರು ಬಯಲಿಗೆಳೆದಿದ್ದರು.

ಇಂಜಿನಿಯರ್ ಗಳು ಮುಷ್ಕರ ಹೂಡಿ, ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ, ಅವಧಿಗೆ ಮುನ್ನ ಆರ್ ಪಿ ಶರ್ಮ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ ಶರ್ಮ, ತಮ್ಮ ವರ್ಗಾವಣೆ ಆದೇಶ ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರ್ವಕವಾಗಿದೆ ಎಂದು ಕರ್ನಾಟಕ ಆಡಳಿತ್ಮಾಕ ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮಂಡಳಿ ಸರ್ಕಾರದ ವರ್ಗಾವಣೆ ಆದೇಶಕ್ಕೆ ತಡೆ ನೀಡಿ ಆದೇಶ ನೀಡಿರುವುದಲ್ಲದೆ, ಸರ್ಕಾರದ ಕ್ರಮ ಕಾನೂನುಬಾಹಿರವಾಗಿದೆ ಎಂದು ಹೇಳಿದೆ. ಆರ್ ಪಿ ಶರ್ಮ ಅವರನ್ನು ಬಿಎಂಟಿಎಫ್ ಎಡಿಜಿಪಿಯಾಗಿ ಜನವರಿ, 2012ರಲ್ಲಿ ನೇಮಕ ಮಾಡಲಾಗಿದೆ. ಅವರ ಅಧಿಕಾರ ಅವಧಿ ಡಿ,31,2012ರ ತನಕ ಇದೆ.

ಮೇಯರ್ ವೆಂಕಟೇಶಮೂರ್ತಿ ಕಾನೂನು ಬಾಹಿರವಾಗಿ ಬಗರ್ ಹುಕುಂ ಜಮೀನು ಖರೀದಿ, ಬೆಂಗಳೂರು ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಎಂಜಿನಿಯರ್ ಗಳ ವಿರುದ್ದದ ತನಿಖೆ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದರು.

ಮೇಯರ್ ಪ್ರಕರಣದಲ್ಲಿ ಸಾಕ್ಷಿಯಾಗುವಂತೆ ಕಚೇರಿಗೆ ಬರುವಂತೆ ತಮ್ಮ ಬಾಸ್ ಗೃಹ ಸಚಿವ ಆರ್ ಅಶೋಕ್ ಅವರಿಗೆ ಸಮನ್ಸ್ ಕಳಿಸಿ ಸುದ್ದಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+