ರೀಟೈಲ್ ನಲ್ಲಿ ಎಫ್ ಡಿಐ, ಕಲಾಂ ಸಲಾಂ

ಭಾರತ್ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಉಪನ್ಯಾಸ ನೀಡಿದ ಕಲಾಂ, 'ಎಫ್ ಡಿಐ ಅಪಾಯಕಾರಿಯಲ್ಲ. ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಎಫ್ ಡಿಐ ತರುತ್ತಿರುವ ಯುಪಿಎ ಕ್ರಮ ಸ್ವಾಗತಾರ್ಹ ಎಂದರು.
ಜಾಗತೀಕರಣವನ್ನು ಅಳವಡಿಸಿಕೊಂಡಿರುವ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ಈ ರೀತಿ ಕೈ ಜೋಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಕಲಾಂ ಹೇಳಿದರು.
ಸುಮಾರು 250 ಮಿಲಿಯನ್ ಟನ್ ಗಳಷ್ಟು ಆಹಾರಧಾನ್ಯಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಭಾರತ ಈಗ ಈ ವಿಷಯದಲ್ಲಿ ಸ್ವತಂತ್ರವಾಗಿದೆ. ಅದೇ 400 ಮಿಲಿಯನ್ ಟನ್ ಗಳಷ್ಟು ಆಹಾರಧಾನ್ಯ ಉತ್ಪಾದನೆಯಾದರೆ, ನಾವು ಅದನ್ನು ಮಾರಾಟ ಮಾಡದೆ ವಿಧಿಯಿಲ್ಲ. ಯಾವ ರಾಷ್ಟ್ರಕ್ಕೆ ಅಗತ್ಯವಿದೆಯೋ ಅಲ್ಲಿಗೆ ರಫ್ತು ಮಾಡಬೇಕಾಗುತ್ತದೆ. ರಫ್ತು ಹೆಚ್ಚಿದ್ದಷ್ಟು ನಮಗೆ ಲಾಭ ಎಂದು ಕಲಾಂ ಹೇಳಿದರು.
ತಮಿಳುನಾಡಿನ ವಿವಾದಿತ ಕುಂಡಕುಳಂ ಅಣುಶಕ್ತಿ ಸ್ಥಾವರ ಯೋಜನೆಯ ಪರ ಮಾತನಾಡಿದ ಕಲಾಂ, ಈ ಯೋಜನೆ ಅಣುವಿಕಿರಣ ತೊಂದರೆಗಳಿಂದ ಮುಕ್ತವಾಗಿದ್ದು, ಸುರಕ್ಷಿತವಾಗಿದೆ. ಅಣುಶಕ್ತಿ ನಾನು ವಿರೋಧಿಸುತ್ತಿಲ್ಲ. ಮಾಲಿನ್ಯಕಾರಿ ಇಂಧನ ಉತ್ಪಾದಿಸುವ ಯಾವುದೇ ಸ್ಥಾವರವಾದರೂ ನನ್ನ ವಿರೋಧವಿರುತ್ತದೆ ಎಂದು ಕಲಾಂ ಹೇಳಿದರು.
ಒಂದೇ ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿ, ಅಧಿಸೂಚನೆ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿಲ್ಲರೆ ವಹಿವಾಟು ಎಂದರೇನು?: ಸರಕುಗಳ ವಿತರಣೆ ಅಥವಾ ಮಾರಾಟ ವಹಿವಾಟು ನಡೆಸುವ ಸಂಸ್ಥೆಯೊಂದು ನಿರ್ದಿಷ್ಟ ಉತ್ಪನ್ನವೊಂದನ್ನು ತಯಾರಿಸಿ ಅದರ ಒಡೆತನದ ಜೊತೆಗೆ ಅದನ್ನು ಎಲ್ಲೆಡೆ ಸ್ವತಃ ತಾನೇ ಮಾರಾಟ ಮಾಡುವುದಕ್ಕೆ ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಎನ್ನುವರು.
ಉದಾ: Koutons Retail(ಜವಳಿ ಬ್ರ್ಯಾಂಡ್)(ಶೇ. 20 ರಷ್ಟು ಏರಿಕೆ ಕಂಡಿದೆ ಜ.12)ಇದರಿಂದ ಇಟಲಿ ಮತ್ತು ಫ್ರಾನ್ಸ್ನ ಫ್ಯಾಷನ್ ಬ್ರಾಂಡ್ಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ವಹಿವಾಟನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.ಇದು ಪರೋಕ್ಷವಾಗಿ ದೇಶಿ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸಲಿದೆ.
ಇದೇ ವೇಳೆ, ಬಹು ಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಸುಮಾರು 80 ಲಕ್ಷ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications