ಗೀತಿಕಾ ಆತ್ಮಹತ್ಯೆ, ಬಾಲಿವುಡ್ ನಟಿಗೆ ಕುತ್ತು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೂಪುರ್ ಮೆಹ್ತಾ ಅವರನ್ನು ಪ್ರಶ್ನಿಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದ ನೂಪುರ್ ಮೆಹ್ತಾ ಅವರು ಈಗ ಪೊಲೀಸರ ಪ್ರಶ್ನೆಗಳಿಗೆ ತಯಾರಾಗಬೇಕಿದೆ.
ಗೀತಿಕಾ ಅವರ ಜೊತೆಗೆ ನೂಪುರ್ ಕೂಡಾ ಗೋಪಾಲ್ ಕಂಡಾ ಒಡೆತನದ ಎಂಡಿಎಲ್ ಆರ್ ಏರ್ ಲೈನ್ಸ್ ನ ಉದ್ಯೋಗಿಯಾಗಿದ್ದರು ಎಂಬ ಸತ್ಯ ಹೊರಬಿದ್ದಿದೆ. ಎಂಡಿಎಂಎಲ್ ಏರ್ ಲೈನ್ಸ್ ಮುಚ್ಚಿದ ಮೇಲೆ 2009ರಲ್ಲಿ ಗೋವಾದ ಕ್ಯಾಸಿನೋವೊಂದರಲ್ಲಿ ಆಕೆ ಉದ್ಯೋಗಕ್ಕೆ ಸೇರಿಕೊಂಡಳು. ಈ ಕ್ಯಾಸಿನೋ ಕೂಡಾ ಕಂಡಾ ಮಾಲೀಕತ್ವಕ್ಕೆ ಸೇರಿದ್ದಾಗಿದೆ.
ನೂಪುರ್ ಹೇಳಿದ ನೂತನ ಕಥೆ: ನಾನು ಕೆಲಸಕ್ಕೆ ಸೇರಿದಾಗ ಅಲ್ಲಿದ್ದ ಸ್ಟಾಫ್ ನೋಡಿ ನನಗೆ ಆಶ್ಚರ್ಯವಾಯಿತು. ಕಂಡಾ ತನ್ನ ಎಲ್ಲಾ ನೆಚ್ಚಿನ ಏರ್ ಹೊಸ್ಟೇಸ್ ಗಳನ್ನು ಕ್ಯಾಸಿನೋಗೆ ಸೇರಿಸಿಕೊಂಡಿದ್ದ. ಕಾಂಗ್ರೆಸ್ ಪಕ್ಷ ಗಣ್ಯಾತಿಗಣ್ಯರು, ಉದ್ಯಮಿಗಳು ಈ ಕ್ಯಾಸಿನೋಗೆ ಬರುತ್ತಿದ್ದರು ಎಂದು ನೂಪುರ್ ಹೇಳಿದ್ದಾಳೆ.
ಕಂಡಾಗೆ ಅಂಕಿತಾ ಎಂಬುವಳ ಜೊತೆ ದೈಹಿಕ ಸಂಪರ್ಕವಿತ್ತು. ಇಬ್ಬರಿಗೂ ಒಂದು ಮಗು ಸಹಾ ಇದೆ. ಗೀತಿಕಾ ಹಾಗೂ ಅಂಕಿತಾ ಜೊತೆ ಆಗಾಗ ಕಿತ್ತಾಟ ನಡೆಯುತ್ತಿತ್ತು. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಂಕಿತಾ ವಿರುದ್ಧ ಎಫ್ ಐಆರ್ ಕೂಡಾ ದಾಖಲಾಗಿತ್ತು ಎಂದು ನೂಪುರ್ ಹೇಳಿದ್ದಾಳೆ.
ನೂಪುರ್ ಹೇಳಿಕೆ ಪುಷ್ಟಿ ನೀಡುವಂತೆ ಗೀತಿಕಾ ಕೂಡಾ ತನ್ನ ಸೂಸೈಡ್ ನೋಟ್ ನಲ್ಲಿ ಅಂಕಿತಾಳ ಹೆಸರನ್ನು ಪ್ರಸ್ತಾಪಿಸಿದ್ದಾಳೆ. ಸದ್ಯ ಎಂಡಿಎಲ್ ಆರ್ ನ ಉದ್ಯೋಗಿ ಸಹಾಯಕ ಎಚ್ ಆರ್ ಮ್ಯಾನೇಜರ್ ಚಂದ್ ಶಿವರುಪ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನಕಲಿ ಲೆಟರ್ ತಯಾರಿಕೆ, ಫ್ರೊಫೈಲ್ ಬದಲಾವಣೆ ಮುಂತಾದ ಕುಕೃತ್ಯಗಳನ್ನು ಎಸೆಗಿ ಗೀತಿಕಾ ವಿರುದ್ಧ ಆರೋಪ ಹೊರೆಸಿ ಕೆಲಸದಿಂದ ವಜಾಗೊಳಿಸುವುದು, ಆಕೆಯನ್ನು ದುಬೈಗೆ ರವಾನಿಸಲು ಸಂಸ್ಥೆ ಯತ್ನಿಸಿದ್ದರ ಹಿಂದೆ ಶಿವ ರುಪ್ ಕೈವಾಡ ಇತ್ತು ಎಂಬುದು ತಿಳಿದು ಬಂದಿದೆ.
ಗೋಪಾಲ್ ಅವರು ಗೀತಿಕಾಗೆ ಕಳಿಸಿದ್ದಾರೆ ಎನ್ನಲಾದ 400ಕ್ಕೂ ಅಧಿಕ ಎಸ್ ಎಂಎಸ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಎಸ್ ಎಂಎಸ್ ಗಳನ್ನು ಡಿಕೋಡ್ ಮಾಡಿದರೂ ಏನು ಪ್ರಯೋಜನಕ್ಕೆ ಬಂದಿಲ್ಲ.
ಗೀತಿಕಾ ಆತ್ಮಹತ್ಯಾ ಪ್ರಕರಣದಲ್ಲಿ ಅರುಣಾ ಚಡ್ಡಾ ಹಾಗೂ ಗೋಪಾಲ್ ಕಂಡಾ ಅವರಿಂದ ಸ್ಪಷ್ಟ ಮಾಹಿತಿ ಕಲೆ ಹಾಕಲು ಸೋತಿರುವ ಪೊಲೀಸರು ಈಗ ನೂಪುರ್ ಹೇಳಿಕೆ ಮೇಲೆ ತನಿಖೆ ಕೈಗೊಳ್ಳಲಿದ್ದಾರೆ. ಗೀತಿಕಾಳ ಮರಣೋತ್ತರ ಪರೀಕ್ಷೆ ವರದಿಯನ್ನು ಗೌಪ್ಯವಾಗಿಡುವಲ್ಲಿ ಸೋತ ಪೊಲೀಸರು ಕೋರ್ಟಿನಲ್ಲಿ ಛೀಮಾರಿ ಹಾಕಿಸಿಕೊಂಡ ಪ್ರಸಂಗವೂ ನಡೆದಿದೆ.
ಕೋರ್ಟ್ ಸೇರುವ ಮುನ್ನ ಗೀತಿಕಾ autopsy ವರದಿ ಮಾಧ್ಯಮಗಳ ಡೆಸ್ಕ್ ಸೇರಿತ್ತು. ಗೀತಿಕಾಳ ಜೊತೆ ಅನೈಸರ್ಗಿಕವಾಗಿ ಸಂಭೋಗ ಕ್ರಿಯೆ ನಡೆದಿರುವ ಬಗ್ಗೆ ಈ ವರದಿಯಲ್ಲಿ ಮಾಹಿತಿ ಇದೆ ಎನ್ನಲಾಗಿದೆ. ವಿಚಾರಣೆ ವೇಳೆ ಗೋಪಾಲ್ ಆಪ್ತೆ ಅರುಣಾ ಚಡ್ಡಾ ಕುತೂಹಲ ಮಾಹಿತಿಯನ್ನು ಹೊರ ಹಾಕಿದ್ದು, ಗೀತಿಕಾಗೆ ಗರ್ಭಸ್ರಾವವಾಗಿತ್ತು ಎಂದಿದ್ದರು. ಆ.5 ರಂದು 23 ವರ್ಷದ ಗೀತಿಕಾ ತನ್ನ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications