Get Updates
Get notified of breaking news, exclusive insights, and must-see stories!

ಹಾಸನ ಬಿಟ್ಟು ಕದಲಲ್ಲ ಎಂದ ಈಶಾನ್ಯ ವಿದ್ಯಾರ್ಥಿಗಳು

Sudents
ಹಾಸನ, ಆ. 19: ಈಶಾನ್ಯ ರಾಜ್ಯಗಳ ಜನರಿಗೆ ಭದ್ರತೆ ಒದಗಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಅದನ್ನು ಲೆಕ್ಕಿಸದೇ ಇಲ್ಲಿರುವ ಅಲ್ಲಿನ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸಾಕಷ್ಟು ಜಿಲ್ಲೆಗಳಲ್ಲಿ ಈ ರೀತಿ ಆಗುತ್ತಿದ್ದರೆ ಆಶ್ಚರ್ಯಕರವೆಂಬಂತೆ ಹಾಸನದಲ್ಲಿರುವ ವಿದ್ಯಾರ್ಥಿಗಳು ಮಾತ್ರ ಹಾಸನ ಬಿಟ್ಟು ತೆರಳುತ್ತಿಲ್ಲ. "ಹಾಸನ ಜಿಲ್ಲೆ ಸುರಕ್ಷಿತವಾಗಿದೆ, ನಾವು ಇಲ್ಲಿಯೇ ಉಳಿಯುತ್ತೇವೆ" ಎಂದಿದ್ದಾರೆ ಬಹತೇಕ ವಿದ್ಯಾರ್ಥಿಗಳು.

ಹಾಸನದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್, ಇತರ ಕೋರ್ಸ್ ಗಳನ್ನು ಓದುತ್ತಿರುವ ನೂರಾರು ವಿದ್ಯಾರ್ಥಿಗಳು ತಮಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಪಾಯಗಳೂ ಉಂಟಾಗಿಲ್ಲ. ಇಲ್ಲಿ ಯಾವ ರೀತಿಯಲ್ಲೂ ಸುಳ್ಳು ವದಂತಿ ಹಬ್ಬಿಲ್ಲ. ಹೀಗಾಗಿ ನಾವು ಹಾಸನ ಬಿಟ್ಟು ನಮ್ಮೂರಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ.

"ನಮ್ಮ ಪೋಷಕರು ಸಾಕಷ್ಟು ಆತಂಕಗೊಂಡಿದ್ದಾರೆ. ದೂರವಾಣಿ ಕರೆ ಮಾಡಿ ಊರಿಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ ಕೂಡ. ಆದರೆ ಜಿಲ್ಲಾ ಪೊಲೀಸರು ಇಲ್ಲಿ ಸೂಕ್ತ ಭದ್ರತೆ ನೀಡಿರುವದರ ಜೊತೆಗೆ ಕಾಲೇಜಿನಲ್ಲಿ ಆಡಳಿತ ಮಂಡಳಿ ಕೂಡ ಯಾವುದೇ ತೊಂದರೆಯಾಗದಂತೆ ಅಭಯ ನೀಡಿರುವುದರಿಂದ ನಮಗೇನೂ ಭಯವಿಲ್ಲ.

ನಾವು ನಮ್ಮ ಪೋಷಕರಿಗೆ ಈ ಕಾರಣಕ್ಕೆ ಊರಿಗೆ ಬರುವುದಿಲ್ಲ ಎಂದೇ ಹೇಳುತ್ತಿದ್ದೇವೆ. ಸಹಜವಾಗಿ ಆತಂಕಗೊಂಡಿರುವ ನಮ್ಮ ಪೋಷಕರು ವಾಪಸ್ಸಾಗುವಂತೆ ಹೇಳಿ ವಿಮಾನ ಯಾನದ ಟಿಕೆಟ್ ಕೊಡಿಸಿದ್ದಾರೆ. ಆದರೆ ನಮಗೇನೂ ತೊಂದರೆ ಇಲ್ಲದ ಕಾರಣ ನಾವು ಊರಿಗೆ ಹೋಗುವುದಿಲ್ಲ" ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+