ಟೆಕ್ಕಿ ಪವನ್ ಸಾವು: ಮೊದಲು ಸಹಿ ಹಾಕಿ- MEA

ಇತ್ತ ಬೆಂಗಳೂರಿನಲ್ಲಿ ಮೃತ ಪವನ್ ಕುಮಾರನ ಕುಟುಂಬದವರು ಆತನ ಶವಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿರುವಾಗ ಒಪ್ಪಿಗೆಯ ಪತ್ರಗಳಿಗೆ ಸಹಿ ಹಾಕದ ಹೊರತು ನಾವೇನೂ ಮಾಡಲಾಗುವುದಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.
ಆದರೆ ಪವನ್ ಕುಟುಂಬಸ್ಥರು ಒಪ್ಪಿಗೆಯ ಪತ್ರಗಳಿಗೆ ಸಹಿ ಹಾಕಲು ಸುತರಾಂ ಸಿದ್ಧರಿಲ್ಲ. Cognizant ಕಂಪನಿ ತಮ್ಮ ಪುತ್ರನ ಸಾವಿನ ಬಗ್ಗೆ ಅನೇಕ ವಿಷಯಗಳನ್ನು ಇತ್ಯರ್ಥಪಡಿಸಬೇಕಾಗಿದೆ. ಮೊದಲು ಆ ಕೆಲಸವಾಗಲಿ ಎಂದು ಹಠ ಹಿಡಿದಿದ್ದಾರೆ.
ಆದರೆ ಇದರ ಹೊರತಾಗಿಯೂ ನ್ಯೂಯಾರ್ಕ್ ಕಾನ್ಸುಲೇಟಿನ ಡೆಪ್ಯುಟಿ ಕಾನ್ಸುಲ್ ಜನರಲ್ ಪವನ್ ಕುಮಾರ್ ಬಜಾಜ್ ಅವರು Cognizant ಕಂಪನಿಯ ಅಧಿಕಾರಿಗಳು, ಟೆಕ್ಕಿ ಪವನ್ ಕುಮಾರನ ತಂದೆ ಅಂಜಯ್ಯ ಮತ್ತು MEA ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಯಾವುದೇ ಮೃತ ದೇಹವನ್ನು ಸ್ವದೇಶಕ್ಕೆ ವಾಪಸ್ ಕಳಿಸಬೇಕೆಂದರೆ ಅಥವಾ ಆ ದೇಶದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕೆಂದರೆ ಮೃತ ವ್ಯಕ್ತಿಯ ತಂದೆ ಅಥವಾ ಹತ್ತಿರದ ರಕ್ತ ಸಂಬಂಧಿಗಳು authorisation letterಗೆ ಸಹಿ ಹಾಕುವುದು ಕಾನೂನು ಪ್ರಕಾರ ಕಡ್ಡಾಯ. ಆದರೆ ಅಂಜಯ್ಯ ಅವರು ಅಂತಹ ಯಾವುದೇ ಪತ್ರಕ್ಕೂ ಸಹಿ ಹಾಕಲು ತಾವು ಸಿದ್ಧವಿಲ್ಲ ಎಂದು ಬಜಾಜ್ ಗೆ ಹೇಳಿದ್ದಾರೆ.
ಅನುಕಂಪವೂ ಬೇಡ, ಆಧಾರವೂ ಬೇಡ, ಕಾರಣ ಹೇಳಿ ಹೋಗಿ ಸಾಕು: ಈ ಮಧ್ಯೆ, ಅನುಕಂಪದ ಆಧಾರ ಮೇಲೆ ಟೆಕ್ಕಿ ಪವನ್ ಕುಮಾರ್ ಸೋದರಿ ಗುಣಶೀಲಾಗೆ Cognizant ಕಂಪನಿ ಉದ್ಯೋಗ ಕಲ್ಪಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂಬುದನ್ನು ಪವನ್ ಕುಟುಂಬಸ್ಥರು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಇನ್ನು ಭಾರಿ ಪರಿಹಾರ ಮೊತ್ತ ನೀಡಬೇಕು ಎಂದೂ ನಾವು ಕೇಳುತ್ತಿಲ್ಲ.
ಅಂತಹ ಯಾವುದೇ ವಿಚಾರವೂ ತಮ್ಮ ಬಳಿಯಿಲ್ಲ. ನಾವು ಕೇಳುತ್ತಿರುವುದು ಇಷ್ಟೇ - ನ್ಯೂಜೆರ್ಸಿ ಪೊಲೀಸರು ದಾಖಲಿಸಿರುವ FIRನ ಒಂದು ಪ್ರತಿ, suicide note, ಲ್ಯಾಪ್ ಟಾಪ್ ಮತ್ತು ಕೇಸಿಗೆ ಸಂಬಂಧಪಟ್ಟ ಇತರೆ ದಾಖಲೆಗಳನ್ನಷ್ಟೇ ಎಂದು ಶಿಕ್ಷಕಿ ಗುಣಶೀಲಾ ಸ್ಪಷ್ಟಪಡಿಸಿದ್ದಾರೆ.
ಜತೆಗೆ ಕುಟುಂಬದವರ ಪೈಕಿ ಒಬ್ಬರನ್ನು ನ್ಯೂಜೆರ್ಸಿಗೆ ಕಳಿಸಬೇಕು ಎಂದು ಪಟ್ಟುಹಿಡಿದಿರುವುದ ನಿಜ. ಇದರಿಂದ ಅಲ್ಲಿ ನಡೆದಿದ್ದೇನು ಎಂದು ಅರಿಯಲು ನಮ್ಮ ಕುಟುಂಬಕ್ಕೆ ನೆರವಾಗಲಿದೆ. ಹಾಗೆಯೇ, ಮಹಿಳೆಯೊಬ್ಬರ ಹತ್ಯೆ ಪ್ರಕರಣದಲ್ಲಿ ಪವನ್ ಕುಮಾರ್ ಹೆಸರು ಶಾಮೀಲಾಗಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ಈ ರಾಮಾಯಣದ ಮಧ್ಯೆ ಪವನ್ ಕುಮಾರ್ ಶವವನ್ನು ಭಾರತಕ್ಕೆ ತಂದು, ಅಂತ್ಯಕ್ರಿಯೆಗೆ ಅನುವು ಮಾಡಿಕೊಡುವುದು ಯಾವಾಗಲೋ ಕಾದುನೋಡಬೇಕು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications