ರೆಡ್ಡಿ ಕಥೆ ಮುಗಿಯಿತು; ಲಕ್ಷ್ಮಿನಾರಾಯಣ ಕೈಗೆ ಪಟ್ಟಾಭಿ

ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಇದಕ್ಕೆ ತಥಾಸ್ತು ಅನ್ನುವ ಎಲ್ಲ ಸಾಧ್ಯತೆಯೂ ಇದೆ. ಅಲ್ಲಿಗೆ ಜನಾರ್ದನ ರೆಡ್ಡಿಯ ಕಥೆ ಮುಗಿಯಿತು. ನ ಭೂತೋ ನ ಭಿವಿಷ್ಯತ್ ಎಂಬಂತೆ ತಾನು ಯಾವ ನ್ಯಾಯಮೂರ್ತಿಯ ಮುಂದೆ ಕೈಕಟ್ಟಿಕೊಂಡು ತನಿಖಾ ವರದಿಯನ್ನು ಒಪ್ಪಿಸಬೇಕಿತ್ತೋ ಅದೇ ಜಡ್ಜ್ ನನ್ನು ತನ್ನ ಬಲೆಗೆ ಕೆಡವಿದ್ದೂ ಅಲ್ಲದೆ ಆತನನ್ನು ತನ್ನ ಎದುರಿಗೆ ಕೂರಿಸಿಕೊಂಡು ಒಂದೊಂದೇ ಪ್ರಶ್ನೆಗಳನ್ನು ಕೇಳುವ ಪರಿಸ್ಥಿತಿಯನ್ನೂ ನಿರ್ಮಿಸಿಬಿಟ್ಟಿದ್ದಾರೆ ಸಿಬಿಐ ಲಕ್ಷ್ಮಿನಾರಾಯಣ.
ಅಂದಹಾಗೆ, ಜಡ್ಜ್ ಪಟ್ಟಾಭಿ ಪ್ರಸ್ತುತ ಭ್ರಷ್ಟಾಚಾರ ನಿಗ್ರಹ ದಳದ (ACB) ಬಂಧನದಲ್ಲಿದ್ದಾರೆ. ಈ ಮಧ್ಯೆ, ಮೀಡಿಯಾ ಡಾರ್ಲಿಂಗ್ ಸಿಬಿಐ ಲಕ್ಷ್ಮಿನಾರಾಯಣರನ್ನು ಆಂಧ್ರ ಹೈಕೋರ್ಟ್ ಸ್ವಲ್ಪಮಟ್ಟಿಗೆ ಗದರಿಕೊಂಡಿದ್ದು, ಎಲ್ಲದಕ್ಕೂ ಮೀಡಿಯಾಗಳ ಮುಂದೆ ಹೋಗಬೇಡಿ. ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿ. ಜನ ಗುರುತಿಸುತ್ತಾರೆ ಎಂದು ಕಿವಿ ಹಿಂಡಿದೆ.
KMF ಸೋಮ ರೆಡ್ಡಿ ಬಂಧನ ಈಗ್ಲೋ ಆಗ್ಲೋ: ಜನಾರ್ದನ ರೆಡ್ಡಿಗೆ ಜೈಲು ಸಂಕಟ ಹೆಚ್ಚಾಗಿದೆ. ಏನಾದರೂ ಮಾಡಿ ತಮ್ಮನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಬೇಕೆಂದು ಬಂಡ ಅಣ್ಣ KMF ಸೋಮಶೇಖರ ರೆಡ್ಡಿಯನ್ನು ಯಾವುದೇ ಕ್ಷಣ ಸಿಬಿಐ ಲಕ್ಷ್ಮಿನಾರಾಯಣ ಬಂಧಿಸಬಹುದಾಗಿದೆ.
ಸಾಕ್ಷಾತ್ ನ್ಯಾಯಪುತ್ರರಿಗೇ ಲಂಚ ತಿನ್ನಿಸೋಕ್ಕೆ ಆಗುತ್ತೇನ್ರೀ ಎಂದು ಬಳ್ಳಾರಿಯಲ್ಲಿ ಅಮಾಯಕ ನಾಟಕವಾಡಿದ್ದ ಸೋಮಶೇಖರ ರೆಡ್ಡಿಯೇ ನನ್ನ ಕೈಗೆ ಕೋಟ್ಯಂತರ ರುಪಾಯಿ ಕೊಟ್ಟು (ಬರೋಬ್ಬರಿ 9.5 ಕೋಟಿ ನಗದು) ತಮ್ಮನನ್ನು ಬಿಡಿಸಿಕೊಮಡು ಹೋಗಲು ಜಾಮೀನು ಕೊಡಿಸು ಎಂದು ಮನವಿ ಮಾಡಿದ್ದರು ಎಂದು ನಿನ್ನೆಯಷ್ಟೇ ACB ಬಂಧನಕ್ಕೀಡಾದ ರೌಡಿ ಶೀಟರ್ ಯಾದಗಿರಿ ರಾವ್ ಹೇಳುವ ಮೂಲಕ KMF ಸೋಮ ರೆಡ್ಡಿಗೆ ಮುಳುಗು ನೀರು ತಂದಿದ್ದಾರೆ.
ಇನ್ನು, ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿಗೆ ಜೈಲು ಕಾಟ ಶುರುವಾದಂತಿದೆ. ಇದೇ ತಿಂಗಳ 9ರಂದು ಕೋರ್ಟಿಗೆ ಬನ್ನಿ ಎಂದು ಬೆಂಗಳೂರು ಸಿಬಿಐ ನ್ಯಾಯಾಲಯ ಜನಾ ರೆಡ್ಡಿ ಪತ್ನಿ ಅರುಣಾಗೆ ಆದೇಶಿಸಿದೆ. ಇದರಿಂದ ತಕ್ಷಣಕ್ಕೆ ಅರುಣಾ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ ವಿಚಾರಣೆ ವೇಳೆಯೇ ಬಂಧನಕ್ಕೀಡಾದರೂ ಆಶ್ಚರ್ಯವೇನಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications