ಅಜೇಯ ಜರ್ಮನಿ ಕ್ವಾಟ್ವರ್ಸ್ ಗೆ, ಡೆನ್ಮಾರ್ಕ್ ಔಟ್

ಗ್ರೂಪ್ ಬಿ ನಲ್ಲಿ ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದ ಜರ್ಮನಿ ಅಗ್ರ ಸ್ಥಾನಿಯಾಗಿ 9 ಅಂಕಗಳಿಸಿ ಮುಂದಿನ ಹಂತಕ್ಕೇರಿದೆ. ಗ್ರೂಪ್ ಆಫ್ ಡೆತ್ ನಲ್ಲಿ ನೆದರ್ಲೆಂಡ್ ಹಾಗೂ ಡೆನ್ಮಾರ್ಕ್ ಟೂರ್ನಿಯಿಂದ ಹೊರಬಿದ್ದಿದೆ. ಕ್ವಾರ್ಟರ್ ಫೈನಲಿನಲ್ಲಿ ಜರ್ಮನಿ ಗ್ರೀಸ್ ವಿರುದ್ಧ ಆಡಲಿದೆ.
ನೂರನೇ ಪಂದ್ಯವನ್ನು ಆಡುತ್ತಿರುವ ಲೂಕಸ್ ಪೋಡಲಸ್ಕಿ 19ನೇ ನಿಮಿಷದಲ್ಲಿ ಗೋಲು ಬಾರಿಸಿ ತನ್ನ ಶತಕದ ಪಂದ್ಯವನ್ನು ಭರ್ಜರಿಯಾಗಿ ಆರಂಭಿಸಿದರು. ಆದರೆ ಐದು ನಿಮಿಷಗಳ ಬಳಿಕ ಡೆನ್ಮಾರ್ಕ್ ಗೆ ಮೈಕಲ್ ಕ್ರೊಹ್ನ್ ಡೆಹ್ಲಿ ಗೋಲು ಬಾರಿಸಿ ತಂಡಕ್ಕೆ ಸಮಬಲ ಒದಗಿಸಿಕೊಟ್ಟರು.
ಆದರೆ, ಪಂದ್ಯದ 80ನೇ ನಿಮಿಷದಲ್ಲಿ 23 ವರ್ಷದ ರಕ್ಷಣಾ ಪಂಕ್ತಿ ಆಟಗಾರ ಬೆಂಡರ್ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕಳೆದ ಸಪ್ಟೆಂಬರ್ ನಲ್ಲಿ ಪೋಲೆಂಡ್ ವಿರುದ್ಧ ನಡೆದ ಪ್ರದರ್ಶನ ಪಂದ್ಯದಲ್ಲಿ ಜರ್ಮನಿ ಪರವಾಗಿ ಮೊದಲ ಪಂದ್ಯವಾಡಿದ ಬೆಂಡರ್ ಗೋಲು ಜರ್ಮನಿಯ ಗರಿಮೆಯನ್ನು ಹೆಚ್ಚಿಸಿ, ತಂಡಕ್ಕೆ ಜಯ ತಂದು ಕೊಟ್ಟಿದೆ.
ಡೇನಿಯಲ್ ಅಗ್ಗರ್ ತಂಡಕ್ಕೆ ಜರ್ಮನಿಯ ಅದ್ಭುತ ದಾಳಿಕೋರರನ್ನು ತಡೆಯುವುದು ಕಷ್ಟ ಎಂಬ ನಿರೀಕ್ಷೆಯಿತ್ತು. ಆದರೆ, ಪೊಲ್ಸನ್, ಅಗ್ಗರ್ ಹೆಚ್ಚಿನ ಶ್ರಮ ವಹಿಸಿ ಜರ್ಮನಿ ಸ್ಟ್ರೈಕರ್ ಗೊಮೆಜ್ ರನ್ನು ಕಟ್ಟಿ ಹಾಕಿಬಿಟ್ಟರು. ಡೆನ್ಮಾರ್ಕ್ ಮಿಡ್ ಫೀಲ್ಡ್ ಅಷ್ಟಾಗಿ ಬಲಿಷ್ಠವಾಗಿಲ್ಲದಿರುವುದು ಹಾಗೂ ಮುಂಪಡೆಯಲ್ಲಿ ಕ್ರೋನ್ ಡೆಹ್ಲಿ,ಬೆಂಟ್ನರ್ ಅವರಿಗೆ ಸಾಥ್ ನೀಡಲು ರೊಮ್ಮಡೆಲ್ ಇಲ್ಲದಿರುವುದು ಹೊಡೆತ ಕೊಟ್ಟಿತು.
| ಡೆನ್ಮಾರ್ಕ್ | 1 - 2 | ಜರ್ಮನಿ |
| 6(4) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 6(6) |
| 5 | ಕಾರ್ನರ್ಸ್ | 3 |
| 8 | ಫೌಲ್ಸ್ | 6 |
| 4 | ಆಫ್ ಸೈಡ್ | 2 |
| 0 | ಹಳದಿ ಕಾರ್ಡ್ | 0 |
| 0 | ಕೆಂಪು ಕಾರ್ಡ್ | 0 |
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications