ಎಂಎನ್ ಸಿಗಳಿಂದ 71000 ಉದ್ಯೋಗ ಕಡಿತ

ಮುಂದಿನ ಎರಡು ವರ್ಷಗಳಲ್ಲಿ 71,000ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಎಚ್ ಪಿ, ನೋಕಿಯಾ, ಯಾಹೂ ಸೇರಿದಂತೆ 12ಕ್ಕೂ ಅಧಿಕ ಕಂಪನಿಗಳು ಉದ್ಯೋಗಿಗಳ ಸಂಖ್ಯೆ ತಗ್ಗಿಸಿಕೊಳ್ಳಲು ಮುಂದಾಗಿದೆ.
ಕೆಲ ಟೆಕ್ ಕಂಪನಿಗಳು 2012ರ ಆರ್ಥಿಕ ವರ್ಷ ಮುಗಿಯುವ ಮುನ್ನ ಪಿಂಕ್ ಚೀಟಿ ವಿತರಣೆ ಕಾರ್ಯ ಮುಕ್ತಾಯಗೊಳಿಸಲು ನಿರ್ಧರಿಸಿದೆ.
ಹೆಲ್ವೆಟ್ ಪ್ಯಾಕರ್ಡ್(HP), ಮೊಬೈಲ್ ದಿಗ್ಗಜ ನೋಕಿಯಾ, ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನ ಸಂಸ್ಥೆ ಸೋನಿ ಕಾರ್ಪ್, ಇಂಟರ್ನೆಟ್ ಪ್ರಮುಖ ಸಂಸ್ಥೆ ಯಾಹೂ, ಪೆಪ್ಸಿಕೋ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಹಾಗೂ ವಿಮಾನಯಾನ ಕ್ಷೇತ್ರದ ಲುಫ್ತಾನ್ಸಾ ಸಂಸ್ಥೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಇದಲ್ಲದೆ ಪಟ್ಟಿಯಲ್ಲಿ ಕೆಮೆರಾ ಮೇಕರ್ ಒಲಿಂಪಸ್, ಸ್ವೀಡನ್ ಮೂಲದ ಬೇರಿಂಗ್ ಸಂಸ್ಥೆ ಎಸ್ ಕೆ ಎಫ್ , ಔಷಧ ಕ್ಷೇತ್ರದ ನೋವರ್ತಿಸ್ ಎಜಿ, ಆಂಗ್ಲೋ ಡಚ್ ಕಂಪನಿ ಯೂನಿಲೆವರ್, ಮೌಸ್ ಉತ್ಪಾದಕ ಲಾಜಿಟೆಕ್, ಮೋಬೈಲ್ ನಿಸ್ತಂತು ಸೇವೆಯ ವೇರಿಜಾನ್ ವೈರ್ ಲೆಸ್ ಕಂಪನಿಗಳು ಪಟ್ಟಿಯಲ್ಲಿದೆ.
* ಯೂನಿಲೆವರ್ ಕಂಪನಿ ಬ್ರಿಟನ್ನಿನಲ್ಲಿ 500 ಉದ್ಯೋಗಿಗಳನ್ನು ತೆಗೆದುಹಾಕಲಿದೆ. ಭಾರತದಲ್ಲಿನ ವಿಭಾಗಕ್ಕೂ ಹೊಡೆತ ಬೀಳಲಿದೆ.
* ನೋಕಿಯಾ ಜಾಗತಿಕವಾಗಿ 10,000 ಉದ್ಯೋಗ ಕಡಿತ ಮಾಡಲಿದೆ.
* ನೋಕಿಯಾಗೆ ಇದರಿಂದ 1.6 ಬಿಲಿಯನ್ ಯುರೋ ಹಣ ಉಳಿತಾಯವಾಗಲಿದೆ.
* ಎಸ್ ಕೆಎಫ್ ನಿಂದ 400 ಜನ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಭಾರತ, ಚೀನಾ ಹಾಗೂ ಯುರೋಪ್ ನಲ್ಲಿ ಉದ್ಯಮ ಕುಸಿತಕ್ಕೆ ಇದಕ್ಕೆ ಕಾರಣ ಎನ್ನಲಾಗಿದೆ.
* ಲಾಜಿಟೆಕ್ 450 ಜನ ಅಥವಾ ಶೇ 13 ರಷ್ಟು ಮಾನವ ಸಂಪನ್ಮೂಲ ಕಡಿತಗೊಳಿಸಿ ವಾರ್ಷಿಕವಾಗಿ 80 ಮಿಲಿಯನ್ ಯುಎಸ್ ಡಾಲರ್ ಉಳಿಸುವ ನಿರೀಕ್ಷೆ ಹೊಂದಿದೆ.
* ಒಲಿಂಪಸ್ ಕಾರ್ಪ್ 40,000 ಜನರನ್ನು ಕಿತ್ತುಹಾಕಲಿದ್ದು, ಈ ತಿಂಗಳಲ್ಲೇ 2,700 ಉದ್ಯೋಗಿಗಳನ್ನು ಹೊರತಬ್ಬಲಿದೆ. ಶೇ 7 ರಷ್ಟು ಮಾನವ ಸಂಪನ್ಮೂಲ ಕಡಿತ ಗೊಳಿಸಿ ಲಾಭ ಗಳಿಸುವ ಗುರಿ ಹೊಂದಿದೆ.
* ಮುಂದಿನ ಎರಡು ವರ್ಷಗಳಲ್ಲಿ ಎಚ್ ಪಿ 27,000 ಉದ್ಯೋಗಳನ್ನು ಕಳೆದುಕೊಳ್ಳಲಿದೆ.
ಈ ಎಲ್ಲಾ ಉದ್ಯೋಗ ಕಡಿತಕ್ಕೆ ಯುರೋಪ್ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟು ಮೂಲ ಕಾರಣ ಎನ್ನಬಹುದು. 2014ರ ಆರ್ಥಿಕ ವರ್ಷದ ವೇಳೆಗೆ ಸುಮಾರು 3 ರಿಂದ 3.5 ಬಿಲಿಯನ್ ಡಾಲರ್ ಉಳಿತಾಯ ನಿರೀಕ್ಷಿಸಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications