ಆನಂದ್ ವಿಶ್ವನಾಥನ್ ವಿಶ್ವ ಚೆಸ್ ಚಾಂಪಿಯನ್
ಮಾಸ್ಕೋದ ಟ್ರೆಟ್ಯಾಕೋವ್ ಗ್ಯಾಲರಿಯಲ್ಲಿ ಬುಧವಾರ ನಡೆದ ಚೆಸ್ ಚಾಂಪಿಯನ್ಶಿಪ್ನ rapid ಚೆಸ್ ಟೈಬ್ರೇಕರ್ನಲ್ಲಿ ಅಂತಿಮ ಪಂದ್ಯವನ್ನು ಡ್ರಾ ಮಾಡಿಕೊಂಡ ಆನಂದ್ ವಿಶ್ವನಾಥನ್ ಮತ್ತೆ ವಿಶ್ವ ಚಾಂಪಿಯನ್ಶಿಪ್ ಕಿರೀಟ ಧರಿಸಿದರು. ಹಿಂದೆ ಅವರು 2000, 2007, 2008 ಮತ್ತು 2010ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.
12 ಪಂದ್ಯಗಳ ಚಾಂಪಿಯನ್ಶಿಪ್ನಲ್ಲಿ ಗ್ರಾಂಡ್ ಮಾಸ್ಟರ್ಗಳಾದ ಆನಂದ್ ಮತ್ತು ಬೋರಿಸ್ 6 ಪಂದ್ಯಗಳನ್ನು ಗೆದ್ದು ಸಮಬಲ ತೋರಿದ್ದರಿಂದ ಟೈಬ್ರೇಕರ್ ಇಡಲಾಗಿತ್ತು. ಟೈಬ್ರೆಕರ್ನಲ್ಲಿ ಮೊದಲ ಪಂದ್ಯ ಡ್ರಾ ಆಗಿದ್ದರೂ, ಎರಡನೇ ಪಂದ್ಯದಲ್ಲಿ ಬಿಳಿ ಪಾನ್ಗಳೊಂದಿಗೆ ಆಡಿದ ಆನಂದ್ ಗೆದ್ದು ಮುನ್ನಡೆ ಸಾಧಿಸಿದ್ದರು. ಮೂರನೇ ಪಂದ್ಯ ಡ್ರಾ ಆಗಿತ್ತು. ಅಂತಿಮ ಹಂತದಲ್ಲಿ ಮನಸಿನ ಯುದ್ಧವನ್ನು ಗೆದ್ದ ಆನಂದ್ ತಾವು ವಿಶ್ವದ ನಂ.1 ಆಟಗಾರ ಎಂದು ಮತ್ತೆ ಸಾಬೀತುಪಡಿಸಿದರು.
ಟೈಬ್ರೇಕರ್ನ ಮೊದಲ ಪಂದ್ಯ 33 ನಡೆಗಳಲ್ಲಿ ಡ್ರಾ ಆಗಿ ಕೊನೆಗೊಂಡಿತು. ಎರಡನೇ ಮಹತ್ವದ ಪಂದ್ಯದಲ್ಲಿ 77 ನಡೆಗಳಲ್ಲಿ ಆನಂದ್ ಅವರು ಬೋರಿಸ್ ವಿರುದ್ಧ ಜಯ ಸಾಧಿಸಿದರು. ಮುಂದಿನ ಎರಡು ಪಂದ್ಯಗಳು ಹೆಚ್ಚಿನ ಆತಂಕಕ್ಕೆ ಎಡೆಮಾಡಲಿಲ್ಲ. ಈ ಚಾಂಪಿಯನ್ಶಿಪ್ ಅನ್ನು ಗೆಲ್ಲುವ ಮುಖಾಂತರ 42 ವರ್ಷದ ವಿಶ್ವನಾಥನ್ ಆನಂದ್ ಅವರು ಮೂರನೇ ಬಾರಿ ಅವರು ತಮ್ಮ ವಿಶ್ವ ಚಾಂಪಿಯನ್ ಪಟ್ಟುವನ್ನು ಕಾಪಾಡಿಕೊಂಡಿದ್ದಾರೆ.
ಈ ಗೆಲುವು ವಿಶ್ವನಾಥನ್ ಆನಂದ್ ಅವರಿಗೆ 2.55 ಮಿಲಿಯನ್ ಡಾಲರ್ ಒಟ್ಟು ಮೊತ್ತದಲ್ಲಿ 1.4 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವಾಗಿ ತಂದುಕೊಟ್ಟಿದೆ. ಉಳಿದ ಹಣ ಬೋರಿಸ್ ಗೆಲ್ಫ್ಯಾಂಡ್ ಅವರಿಗೆ ದೊರೆಯಲಿದೆ. 2008ರಲ್ಲಿ ಅವರು ವ್ಲಾಡಿಮಿರ್ ಕ್ರಾಮ್ನಿಕ್ ಮತ್ತು 2010ರಲ್ಲಿ ಅವರು ವೆಸೆಲಿನ್ ಟೊಪಾಲೊವ್ ಅವರನ್ನು ಸೋಲಿಸಿದ್ದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ













Click it and Unblock the Notifications