ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 15ಕ್ಕೆ ಅಂಡರ್ ಪಾಸ್ ನಲ್ಲಿ ವಾಹನ ಓಡಿಸಿ

By Mahesh
|
Google Oneindia Kannada News

Kadirenahalli Underpass
ಬೆಂಗಳೂರು, ಮೇ.4: ಕದಿರೇನಹಳ್ಳಿ ಅಂಡರ್ ಪಾಸ್ ಕೊನೆಗೂ ಮೇ.15ರಂದು ಉದ್ಘಾಟನೆಗೊಳ್ಳಲಿದೆ ಎಂದು ಬನಶಂಕರಿ ವಾರ್ಡ್ ಕೌನ್ಸಿಲರ್ ಎಎಚ್ ಬಸವರಾಜು ಹೇಳಿದ್ದಾರೆ.

ಜೆಪಿ ನಗರ, ಬನಶಂಕರಿ, ಜಯನಗರ ಹಾಗೂ ಕುಮಾರಸ್ವಾಮಿ ಲೇಔಟ್ ಗೆ ಸಂಪರ್ಕ ಹಾದಿಯಾಗಿರುವ ಈ ಕದಿರೇನಹಳ್ಳಿ ಅಂಡರ್ ಪಾಸ್ ಈ ವರ್ಷದ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸಿಎಂ ಸದಾನಂದ ಗೌಡರು ಭರವಸೆ ನೀಡಿದ್ದರು.

ಮಾರ್ಚ್,2008ರಲ್ಲಿ 28.72 ರು ವೆಚ್ಚದಲ್ಲಿ ಆರಂಭವಾದ ಅಂಡರ್ ಪಾಸ್ ಕಾಮಗಾರಿ 10 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಅನೇಕ ವಿಘ್ನಗಳನ್ನು ಎದುರಿಸಿದ ಗುತ್ತಿಗೆದಾರರು ಕಾಮಗಾರಿ ವಿಳಂಬದಿಂದಾಗಿ ಭಾರಿ ದಂಡ(ಸುಮಾರು 80 ಲಕ್ಷ ರು.) ವನ್ನು ಕಟ್ಟಿದ್ದಾರೆ.

ಕಾಮಗಾರಿ ವಿಳಂಬ ಮಾಡಿ ದಂಡ ಕಟ್ಟಿದ ಕಂಪನಿಯನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸುವಂತೆ ಗೃಹ ಸಚಿವ ಆರ್ ಅಶೋಕ್ ಅವರು ಸೂಚಿಸಿದರು. ಬಿಬಿಎಂಪಿ ಮಾತ್ರ ಬರೀ ದಂಡ ಪಡೆದು ಸುಮ್ಮನಾಗಿರುವುದು ಏಕೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಅಂಡರ್ ಪಾಸ್ ಕಾಮಗಾರಿ ಈಗಾಗಲೇ ಶೇ.90 ರಷ್ಟು ಪೂರ್ಣಗೊಂಡಿದೆ. ಸರ್ವೀಸ್ ರಸ್ತೆ ಮೇ ತಿಂಗಳ ಮೊದಲ ವಾರದೊಳಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಬಿಬಿಎಂಪಿ ವಕ್ತಾರರು ಹೇಳಿದ್ದಾರೆ.

English summary
At long last, the Kadirenahalli underpass may be thrown open to traffic from May 15 says Banashankari Temple Ward Councillor AH Basavaraju. The underpass connects densely populated areas in Bangalore south, including Banashankari, Jayanagar, J.P. Nagar and Kumaraswamy Layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X