ನಾನು ಗೂಂಡಾ ಸಂಸ್ಕೃತಿ ವಿರೋಧಿ: ಯಡ್ಡಿ

'ನಿಮಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು ಯಾರು ಅಂತ ದಯಮಾಡಿ ಬಹಿರಂಗಪಡಿಸಿ' ಎಂದು ಯಡಿಯೂರಪ್ಪ ಮತ್ತೆ ಮತ್ತೆ ಮನವಿ ಮಾಡಿಕೊಂಡರು.
ಬೆದರಿಕೆ ಒಡ್ಡಿದವರ ವಿವರಗಳನ್ನು ನೀಡಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ನಾನು ನಿಮ್ಮ ಜತೆ ಕೈಜೋಡಿಸುತ್ತೇನೆ. ಅಷ್ಟೇ ಅಲ್ಲ, ಹಿರೇಮಠ್ ಅವರ ಜತೆ ಮಾತುಕತೆಗೂ ಸಿದ್ಧ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೂಡಿರುವ ಕೇಸ್ ವಾಪಸ್ ಪಡೆದುಕೊಳ್ಳುವಂತೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಹಿರೇಮಠ್ ಅವರಿಗೆ ಗಣ್ಯ ವ್ಯಕ್ತಿಗಳಿಬ್ಬರು ಜೀವ ಬೆದರಿಕೆ ಒಡ್ಡಿರುವುದಾಗಿ ಮಂಗಳವಾರ(ಏ.24) ಆರೋಪಿಸಿದ್ದರು.
ಯಡಿಯೂರಪ್ಪ ವಿರುದ್ಧದ ಕೇಸ್ ವಾಪಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವರ ಜತೆ ಸಂಧಾನಕ್ಕೆ ಬರುವಂತೆ ನನಗೆ ದೂರವಾಣಿ ಮೂಲಕ ತಿಳಿಸಿದ್ದರು. ಆದರೆ
ನಾನು ಭೇಟಿಗೆ ನಿರಾಕರಿಸಿದೆ ಎಂದು ಕಳೆದ ಮಾರ್ಚ್ ತಿಂಗಳಿನಲ್ಲೂ ಹಿರೇಮಠ್ ಹೇಳಿದ್ದರು.
ಆದರೆ, ಈ ಬಗ್ಗೆ ಯಾವುದೇ ಪೊಲೀಸ್ ದೂರು ನೀಡಿರಲಿಲ್ಲ. ಅದರ ಅಗತ್ಯವಿಲ್ಲ ಎಂದು ಹಿರೇಮಠ್ ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದರು.












Click it and Unblock the Notifications