'ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಎಲ್ಲವೂ ಸರಿಯಿಲ್ಲ'

ವೆಚ್ಚ ನಿಯಂತ್ರಣ ಸಾಧಿಸುವುದೆಂದರೆ ಸಂಬಳ ಕಡಿತ ಎಂಬುದು ಇನ್ಫಿ CEO ಮಂತ್ರವಾಗಿದೆ. ಅಂದಹಾಗೆ, ಸಾಫ್ಟ್ ವೇರ್ ಕಂಪನಿಗಳಲ್ಲಿ ಒಟ್ಟಾರೆ ಖರ್ಚಿನ ಪ್ರಮಾಣದಲ್ಲಿ ಶೇ. 25ರಷ್ಟು ನೌಕರರ ಸಂಬಳಿಗೆ ವಿನಿಯೋಗವಾಗುತ್ತದೆ rather ವೃಥಾ ಖರ್ಚಾಗುತ್ತದೆ.
ಉಗ್ರ 'ಗೋಡೆ'ಬರಹಗಳು: 2008ರಲ್ಲಿಯೂ ಹೀಗೇ ಆಗಿತ್ತು. ಈಗ ಮತ್ತೆ ... ಇದರಿಂದ ಉದ್ಯೋಗಿಗಳು ಎಷ್ಟು ನಿರಾಶೆಗೊಂಡಿದ್ದಾರೆ ಅಂದರೆ ಇಂಟರ್ ನೆಟ್ ಸಾಮಾಜಿಕ ತಾಣಗಳಲ್ಲಿ ತಮ್ಮ ಕೋಪತಾಪವನ್ನು ಉಗ್ರವಾಗಿ ಹೊರಹಾಕುತ್ತಿದ್ದಾರೆ. ಅಸಂತುಷ್ಟ ಉದ್ಯೋಗಿಗಳು ಫೇಸ್ ಬುಕ್, ಈಮೇಲ್ ... ಹೀಗೆ ಸಿಕ್ಕ ಸಿಕ್ಕ ಅಂತರ್ಜಾಲ ತಾಣಗಳಲ್ಲಿ ಇಂತಹುದೇ 'ಗೋಡೆ'ಬರಹಗಳು ರಾರಾಜಿಸುತ್ತಿವೆ.
ಸದ್ಯಕ್ಕೆ ಅಸಂತುಷ್ಟ ಉದ್ಯೋಗಿಗಳು ತಮ್ಮ ಕೋಪತಾಪ ಹೊರಹಾಕುತ್ತಿರಬಹುದು. ಆದರೆ ಕಾಲಾಂತರದಲ್ಲಿ ಕಂಪನಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಆಶಾಭಾವ ಕಂಪನಿಯ ಆಡಳಿತ ಮಂಡಳಿಯದ್ದು.
ಹಾಗೆಂದೇ, ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿ ವೃಂದಕ್ಕೆ ಮೊನ್ನೆ ಗುರುವಾರ ಮತ್ತು ಶುಕ್ರವಾರ ಈ ಬಗ್ಗೆ ಮನನ ಮಾಡಿಕೊಡಲಾಗಿದೆ. ಆದರೆ Job portal ಗಳ ಪ್ರಕಾರ ಇನ್ಫಿ ಉದ್ಯೋಗಿಗಳು ಭರ್ಜರಿ ಉದ್ಯೋಗ ಬೇಟೆಯಲ್ಲಿದ್ದಾರೆ. ಈ ಪ್ರಮಾಣ ಶೇ. 10ರಷ್ಟು ಹೆಚ್ಚಾಗಿದೆ.
ಇನ್ನು, ಕಂಪನಿಯ ಹಳೆಯ ಉದ್ಯೋಗಿಗಳ ಪ್ರಕಾರ ಎಲ್ಲ ಉದ್ಯೋಗಿಗಳಿಗೂ ಸಂಬಳ ಏರಿಕೆಯನ್ನು ಸ್ಥಗಿತಗೊಳಿಸುವುದು wrong decision. ಹಿರಿಯ ಸಿಬ್ಬಂದಿಗೆ ಮಾತ್ರ ಸ್ವಲ್ಪಮಟ್ಟಿಗೆ ಸಂಬಳ ಏರಿಕೆ ಕಡಿತಗೊಳಿಸಿದ್ದರೆ ಸಾಕಾದೀತು ಎನ್ನಲಾಗಿದೆ. 2008ರಲ್ಲಿ ಘಟಿಸಿದ್ದು ಜಾಗತಿಕ ವಿಷಯದ್ದಾಗಿತ್ತು.
ಆದರೆ ಈಗಿನದು ಕಂಪನಿಯ ಮಟ್ಟದಲ್ಲಾಗಿದೆ. ಇದಕ್ಕೆ ಉದ್ಯೋಗಿಗಳನ್ನು ಹೊಣೆಯಾಗಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಬಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ. ಅನೇಕರು ಈ ಬಾರಿ ಕ್ಯಾಂಪಸ್ಸಿಗೆ ಗುಡ್ ಬೈ ಹೇಳುವುದು (attrition) ಖಚಿತ ಎಂಬುದು ಹಳಬರ ಅನಿಸಿಕೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications