ಸಿಬಿಐ ಭೀತಿ ನಡುವೆ ಶಬರಿಮಲೆಯಲ್ಲಿ ಯಡಿಯೂರಪ್ಪ

ಸುಪ್ರೀಂಕೋರ್ಟ್ ಶುಕ್ರವಾರ(ಏ.13)ವಿಚಾರಣೆ ನಡೆಸಿ ಏನೇ ಆದೇಶ ನೀಡಲಿ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಂತಿದೆ.
ಪುತ್ರ ಬಿವೈ ರಾಘವೇಂದ್ರ, ಆಪ್ತ ಲೆಹರ್ ಸಿಂಗ್ ಹಾಗೂ ಇನ್ನಿತರರನ್ನು ಸೇರಿಸಿಕೊಂಡು ಯಡಿಯೂರಪ್ಪ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ. ಶುಕ್ರವಾರ(ಏ.13) ಹಾಗೂ ಶನಿವಾರ(ಏ.14) ಶಬರಿಮಲೆಯಲ್ಲೇ ನೆಲೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.












Click it and Unblock the Notifications