ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನ್ಯಾ ಹೆಗ್ಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲೇ?'

By Srinath
|
Google Oneindia Kannada News

should-file-defamation-case-against-santosh-hegde-bsy
ಶಿವಮೊಗ್ಗ, ಏ.1: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿನ್ನೆ ನಗರದಲ್ಲಿ ಭರ್ಜರಿ ಸನ್ಮಾನ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ವಿರುದ್ಧ ಮನಸೋಇಚ್ಛೆ ಹರಿಹಾಯ್ದರು. ನನ್ನ ಹೆಸರಿಗೆ ಅವರು ಮಸಿ ಬಳಿದರು ಎಂದು ಬಿಎಸ್‌ವೈ ಜರಿದರು:

'ನಾನು ದೂರವಾಣಿ ಕದ್ದಾಲಿಕೆ ಮಾಡಿದ್ದೇನೆ ಎಂದು ನನ್ನ ವಿರುದ್ಧ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆರೋಪಿಸಿದರು. ಅವರ ಬಗ್ಗೆ ಗೌರವವಿದೆ. ಆದರೆ ಇಂತಹ ಆರೋಪದ ಬಗ್ಗೆ ಸಾಕ್ಷಿ ಇದ್ದರೆ ಬಹಿರಂಗಪಡಿಸಲಿ. ಅಥವಾ ನಾನೇ ಮಾನನಷ್ಟ ಮೊಕದ್ದಮೆ ಹೂಡಲೇ?' ಎಂದು ಸವಾಲು ಎಸೆದರು. ಮೊನ್ನೆಯಷ್ಟೇ ಹಿರಿಯ ಪೊಲೀಸ್ ಅಧಿಕಾರೊಯೊಬ್ಬರು ಸಂತೋಷ್‌ ಹೆಗ್ಡೆ ಅವರ ವಿರುದ್ಧ FIR ದಾಖಲಿಸಿರುವುದು ಗಮನಾರ್ಹ.

'ಅವರ ಬಗ್ಗೆ ಗೌರವ ಇದ್ದುದರಿಂದಲೇ ಅವರ ಮನೆಯವರೆಗೆ ಹೋಗಿ ರಾಜೀನಾಮೆ ವಾಪಸ್ಸು ಪಡೆಯಿರಿ ಎಂದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕಂಡು ಇದನ್ನು ತಡೆಯಲು ಮನಸ್ಸು ಮಾಡಿ ತನಿಖೆ ಮಾಡಿ ಎಂದು ಸೂಚಿಸಿದೆ. ಆದರೆ ಹೆಗಡೆ ಮಾಡಿದ್ದೇನು? ಯಾರು ಅಕ್ರಮ ಗಣಿಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೋ ಅಂತಹವರ ಹೆಸರನ್ನು ಬಿಟ್ಟು ಏನೂ ಮಾಡದ ನನ್ನ ಹೆಸರನ್ನು ಎಳೆ ತಂದರು. ನನ್ನನ್ನು ಆರೋಪಿಯನ್ನಾಗಿಸಲು ಪ್ರಯತ್ನಿಸಿದರು' ಎಂದು ಬಿಎಸ್‌ವೈ ಕೆಂಡಕಾರಿದರು.

'ನಾನು ಅಕ್ರಮ ಗಣಿಗಾರಿಕೆ ತಡೆಯಲು ಯತ್ನ ನಡೆಸಿ ಕೈಗೊಂಡ ಕಾರ್ಯಕ್ರಮಕ್ಕಾಗಿ ಪ್ರಧಾನ ಮಂತ್ರಿಗಳು ನನ್ನನ್ನು ಕರೆದು ಸನ್ಮಾನ ಮಾಡಬೇಕಿತ್ತು. ಗೋವಾದಲ್ಲಿ ನಾನು ಮಾಡಿದ ಕಾರಣಕ್ಕೆ ಅಲ್ಲಿನ ಗಣಿ ಹಗರಣ ಬೆಳಕಿಗೆ ಬಂದು ನಮ್ಮ ಪಕ್ಷ ಜಯಗಳಿಸಿತು ಎಂಬುದನ್ನು ಮರೆಯಬಾರದು' ಎಂದು ಹೇಳಿದರು.

English summary
The ex Lokayukta Santosh Hegde defamed me, says BS Yeddyurappa. Former chief minister B S Yeddyurappa also accused Santosh Hegde of levelling telephone-tapping charge against him during his tenure as chief minister out of vengeance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X