ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಮುನಿರಾಜು ಆಪ್ತರು ನ್ಯಾಯಾಂಗ ಬಂಧನಕ್ಕೆ

By Mahesh
|
Google Oneindia Kannada News

MLA Muniraju
ಬೆಂಗಳೂರು,ಮಾ.1: ಭೂ ಹಗರಣದ ಸುಳಿಯಲ್ಲಿ ಸಿಲುಕಿರುವ ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರಿಗೆ ಸಹಾಯ ಮಾಡಿದ ಸಹ ಆರೋಪಿಗಳಾದ ವಿಶೇಷ ತಹಸಿಲ್ದಾರ್ ರಂಗನಾಥಯ್ಯ ಮತ್ತು ಕಂದಾಯ ಅಧಿಕಾರಿ ಸುರೇಶ್, ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಸಹ ಆರೋಪಿಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಶೇಷ ತಹಸಿಲ್ದಾರ್ ರಂಗನಾಥಯ್ಯ ಹಾಗೂ ಆರ್ ಐ ಸುರೇಶ್ ಅವರನ್ನು ಮಾ.5 ರ ತನಕ ನ್ಯಾಯಾಂಗ ಬಂಧನದಲ್ಲಿರಿಸುವಂತೆ ನ್ಯಾ. ಸುಧೀಂದ್ರರಾವ್ ಅವರು ಗುರುವಾರ(ಮಾ.1) ಸಂಜೆ ಆದೇಶ ನೀಡಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 156(3)ನೇ ಕಲಂ ಅಡಿಯಲ್ಲಿ ಎಸ್. ಮುನಿರಾಜು ಹಾಗೂ ಉಳಿದ ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ.

ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬವರು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ ಶಾಸಕ ಮುನಿರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚನೆ ನೀಡಿತ್ತು.

ಆದರೆ, ಶಾಸಕ ಮುನಿರಾಜು ವಿರುದ್ಧ ತನಿಖೆಗೆ ನ್ಯಾ. ಬಿವಿ ಪಿಂಟೋ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Lokayukta Special judge NK Sudhindra Rao sent Scam hit MLA Muniraju's aide Special Tahasildar Ranganathaiah and Revenue Inspector Suresh to judicial custody till March.5. Lokayukta DYSP have already filed FIR against trio. Lokayukta was probe in to land encroachment allegation case against Muniraju in Dasarahalli Yeshwanthpur hobli Banglore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X