ಹಸುಗೂಸಿನ ಮುಂದೆ ನೇಣಿಗೆ ಶರಣಾದ ಚಾಲಕ

ಕತ್ರಿಗುಪ್ಪೆ ಕಾವೇರಿ ನಗರದ ಆಟೋ ಚಾಲಕ ಪ್ರವೀಣ್ ಕುಮಾರ್(30) ಎಂದಿನಂತೆ ಬುಧವಾರ ರಾತ್ರಿ ಕೂಡಾ ಕುಡಿದು ಬಂದಿದ್ದ. ಇದರಿಂದ ಬೇಸರಗೊಂಡ ಆತನ ಪತ್ನಿ ಪ್ರವೀಣ್ ಜೊತೆ ಜಗಳವಾಡಿದ್ದಾಳೆ. ಸಿಟ್ಟಿನಲ್ಲಿ ಪತ್ನಿಯನ್ನು ಮನೆಯಿಂದ ಹೊರ ಹಾಕಿದ.
ನಂತರ ಒಂದೂವರೆ ವರ್ಷದ ಮಗು ಧನರಾಜ್ ಎದುರಲ್ಲಿ ಫ್ಯಾನಿಗೆ ನೇಣು ಬಿಗಿದು ಸಾವನ್ನಪ್ಪಿದ್ದಾನೆ. ಅಕ್ಕಪಕ್ಕದ ಮನೆಯವರಿಗೆ ಪ್ರವೀಣ್ ಸಾವನ್ನಪ್ಪಿರುವ ಸುದ್ದಿ ಬೆಳಗ್ಗೆ ತಿಳಿದಿದೆ.
ಅಪ್ಪನ ಸಾವನ್ನು ಕಣ್ಣಾರೆ ಕಂಡ ಹಸುಗೂಸು ಅತ್ತು ಅತ್ತು ಸುಸ್ತಾಗಿ ಮಲಗಿಬಿಟ್ಟಿದೆ. ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವಾಗಿದೆ. ಪ್ರವೀಣ್ ಪತ್ನಿ ತನ್ನ ತವರಿಗೆ ತೆರಳಿದ್ದಾಳೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications