ನಾಳಿನ ನಾಯಕರನ್ನು ಹುರಿದುಂಬಿಸಿದ ರಾಬಿನ್ ಶರ್ಮಾ

ಲಾಭ ರಹಿತ ಸಂಸ್ಥೆಯಾದ 'ರಂಗ ದೇ' ಆಯೋಜಿಸಿದ್ದ ಈ ವಿಚಾರ ಸಂಕಿರಣದಲ್ಲಿ ಉದ್ಯಮಿಗಳು, ಐಟಿ ಕಂಪನಿಗಳ ಮುಖ್ಯಸ್ಥರು, ವೃತ್ತಿಪರರು ಮತ್ತು ಅನೇಕ ಯುವಕ ಯುವತಿಯರು ಭಾಗವಹಿಸಿದ್ದರು. ಬೆಂಗಳೂರು ಮಾತ್ರವಲ್ಲ ದೂರದ ಮುಂಬೈ, ಗುರಗಾಂವ್, ಪುಣೆ, ವಿಶಾಖಪಟ್ಟಣ, ಅಹ್ಮದಾಬಾದ್ ಮತ್ತು ಚೆನ್ನೈನಿಂದಲೂ ರಾಬಿನ್ ಶರ್ಮಾ ಮಾತಿಗೆ ಕಿವಿಯಾಗಲು, ಪ್ರೇರೇಪಣೆ ಪಡೆಯಲು ಬಂದಿದ್ದರು.
ಭಾರತದಲ್ಲಿ ಈ ವರ್ಷ ರಾಬಿನ್ ಅವರ ಇದೊಂದೆ ಕಾರ್ಯಕ್ರಮ ಆಯೋಜಿಸಿದ್ದರಿಂದ ದೇಶದ ಎಲ್ಲೆಡೆಯಿಂದ ನಾಯಕತ್ವದಲ್ಲಿ ಆಸಕ್ತಿ ಇರುವವರು ಬಂದಿದ್ದರು. ರಾಬಿನ್ ಶರ್ಮಾ ಅವರು ತಮ್ಮ ಅತ್ಯಂತ ಸ್ಫೂರ್ತಿದಾಯಕವಾದ ಉಪನ್ಯಾಸದಲ್ಲಿ ನಾಯಕತ್ವ, ಯಶಸ್ಸು ಗಳಿಸುವ ಸೂತ್ರ, ಗ್ರಾಹಕರನ್ನು ಒಲಿಸಿಕೊಳ್ಳುವ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಮಾತಿನ ಹೊಳೆ ಹರಿಸಿದರು.
ಯಾವುದೇ ಕೆಲಸಕ್ಕೆ ಕೈಹಾಕಿದರೂ ಸಾಧಿಸುವ, ವೈಯಕ್ತಿಕವಾಗಿ ನಾಯಕತ್ವದ ಗುಣಗಳನ್ನು ಸಂಪಾದಿಸುವುದು ಮಾತ್ರವಲ್ಲದೆ, ನಮ್ಮ ಸುತ್ತಲು ಲೀಡರುಗಳನ್ನು ಬೆಳೆಸುವತ್ತ ನಮ್ಮ ಪ್ರಯತ್ನ ಸಾಗುತ್ತಿರಬೇಕು ಎಂದು ಅವರು ಹೇಳಿದರು. ನಮ್ಮ ಅತ್ಯಂತ ಬಿಡುವಿಲ್ಲದ ಸಮಯದಲ್ಲಿಯೂ ಅತ್ಯುತ್ಕೃಷ್ಟ ಕೆಲಸ ಮಾಡಲು ಬೇಕಾದ 8 ತಂತ್ರಗಾರಿಕೆಯ ಗುಟ್ಟನ್ನು ರಾಬಿನ್ ಶರ್ಮಾ ಮನನ ಮಾಡಿಕೊಟ್ಟರು.
ಜಗತ್ತನ್ನು ಬದಲಾಯಿಸಲು ನಾವು ಮಾಡುತ್ತಿರುವ ಕೆಲಸಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ಎಂದ ಅವರು ನಮ್ಮ ಕಟ್ಟಕಡೆಯ ಜೀವನದ ಕ್ಷಣಗಳಲ್ಲಿ ನಮ್ಮನ್ನು ಬೇರೆಯವರಿಗಿಂತ ವಿಭಿನ್ನವಾಗಿಡುವುದು ನಮ್ಮ ಕರ್ತೃತ್ವವೇ ಎಂಬುದರ ಬಗ್ಗೆ ಚಿಂತನೆಗೆ ಹಚ್ಚಿದರು. ನಾಯಕತ್ವಕ್ಕೆ ಸಂಬಂಧಿಸಿದಂತೆ ಅನೇಕ ಪರಿಕಲ್ಪನೆಗಳು ಇಂದು ಹಳೆಯವಾಗಿದ್ದು, ಅವು ಇಂದು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದರು.
ನಾಯಕತ್ವದ ಪರಿಕಲ್ಪನೆ ವಿವರಿಸುವಾಗ ವಾರೆನ್ ಬಫೆಟ್, ಸ್ಟೀವ್ ಜಾಬ್ಸ್, ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ ಮುಂತಾದವರ ಹೆಸರನ್ನು ಅವರು ಉಲ್ಲೇಖಿಸಿದರು. 'ಅದ್ಭುತ ನಾಯಕತ್ವದ ನಿಯಮಗಳು' ಮುಂತಾದ ವಿಷಯಗಳ ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ರಾಬಿನ್ ಈ ಸಂದರ್ಭದಲ್ಲಿ ವಿವರಿಸಿದರು.
ಅಲ್ಪಾವಧಿ ಸಾಲ ನೀಡುವ ಮೂಲಕ ಗ್ರಾಮೀಣ ಜನತೆಯನ್ನು ಉದ್ಯಮಿಗಳಾಗಿ ಮುನ್ನಡೆಸಿ, ಅವರ ಜೀವನದಲ್ಲಿಯೂ ಬದಲಾವಣೆ ತರುವಂತಹ ಅತ್ಯಂತ ಪ್ರಶಂಸಾರ್ಹ ಕೆಲಸ ಮಾಡುತ್ತಿರುವ ರಂಗ್ ದೇ ಸಂಸ್ಥೆ ಇಂತಹುದೊಂದು ಅತ್ಯದ್ಭುತ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಸ್ತುತ್ಯರ್ಹ.
ರಂಗ್ ದೇ ಸಿಇಓ ಆಗಿರುವ ರಾಮಕೃಷ್ಣ ಅವರು, "ಭಾರತವನ್ನು ಬಡತನ ನಿರ್ಮೂಲನ ಮಾಡುವುದು ರಂಗ್ ದೇ ಸಂಸ್ಥೆಯ ಹೆಗ್ಗುರಿ. ಇದಕ್ಕಾಗಿ ನಮ್ಮ ಈ ಜೀವನವನ್ನೇ ಮುಡಿಪಾಗಿಡುತ್ತೇವೆ. ನಮ್ಮ ಈ ಉದ್ದೇಶದ ಬಗ್ಗೆ ಜನಜಾಗೃತಿ ಮೂಡಿಸಲು ಮತ್ತು ಈ ಚಳವಳಿಯಲ್ಲಿ ಭಾಗವಹಿಸಲು ಜನರಲ್ಲಿ ಪ್ರೋತ್ಸಾಹ ತುಂಬಲೆಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ರಾಬಿನ್ ಶರ್ಮಾ ಅವರ ಭಾಗವಹಿಸುವಿಕೆಯಿಂದ ನಮ್ಮ ಶ್ರಮ ಮತ್ತು ಉದ್ದೇಶ ಸಾರ್ಥಕವಾಗಿದೆ" ಎಂದು ನುಡಿದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications