ಬಿಜೆಪಿ ಕಪ್ಪು ಹಣ ತರಲಿಲ್ಲ ಏಕೆ: ಖಡಕ್ ಪ್ರಶ್ನೆ

ಬಿಜೆಪಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಬಗ್ಗೆ ಮಾತನಾಡುತ್ತಿದೆ. ವಿದೇಶಗಳಲ್ಲಿ ಕಪ್ಪುಹಣ ಜಮೆಯಾಗಿದ್ದರೆ ಅದನ್ನು ವಾಪಸ್ ತರಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆಯಿದ್ದಾಗ ಕಪ್ಪುಹಣ ಏಕೆ ವಾಪಸ್ ಬರಲಿಲ್ಲ ಎಂದು ಗೋವಾ ಚುನಾವಣಾ ಸಭೆಯಲ್ಲಿ ಸೋನಿಯಾ ಪ್ರಶ್ನಿಸಿದ್ದಾರೆ.
ಬರೋಬ್ಬರಿ ಆರು ವರ್ಷ ಅಧಿಕಾರದಲ್ಲಿದ್ದಾಗ ನೀವೇನು ಮಾಡಿದ್ದೀರಿ ಎನ್ನುವ ಪ್ರಶ್ನೆಯನ್ನು ಬಿಜೆಪಿಗೆ ಕೇಳುತ್ತಿದ್ದೇನೆ. ಎಲ್ ಕೆ ಆಡ್ವಾಣಿ ಆಗ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದರು. ಕಪ್ಪುಹಣ ವಾಪಸ್ ತರುವ ನಿಟ್ಟಿನಲ್ಲಿ ಅವರೇನು ಮಾಡಿದ್ದಾರೆ ಎಂದು ಮಾರ್ಮಿಕವಾಗಿ ಕಳಿದ್ದಾರೆ.
ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ನಿರ್ಮೂಲನೆಗೆ ಬಹಳ ದೃಢ ಪ್ರಯತ್ನಗಳನ್ನು ಮಾಡಿದೆ. ಇದು ಕಾಂಗ್ರೆಸ್ ಸರಕಾರ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ. ಲೋಕಸಭೆಯಲ್ಲಿ ಲೋಕಪಾಲ ಮಸೂದೆಯನ್ನು ನಾವು ಮಂಜೂರು ಮಾಡಿಕೊಂಡೆವು. ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಇತರ ಕೆಲವು ಪಕ್ಷಗಳು ಮಸೂದೆ ಮಂಜೂರಾಗದಂತೆ ತಡೆಯೊಡ್ಡಿವೆ. ಬಿಜೆಪಿ ನಾಯಕರು ಆಷಾಢಭೂತಿಗಳು ಎಂದೂ ಸೋನಿಯಾ ಆರೋಪಿಸಿದರು.












Click it and Unblock the Notifications