ಉಪ ಚುನಾವಣೆ ಮತಗಟ್ಟೆ, ನೀತಿ, ನಿಯಮ ವಿವರ

ಚುನಾವಣಾ ವೇಳಾಪಟ್ಟಿ, ನೀತಿ ಸಂಹಿತೆ, ಚುನಾವಣಾಧಿಕಾರಿಗಳು, ಮತಗಟ್ಟೆ ವಿವರ, ಅಭ್ಯರ್ಥಿಗಳು ಮಾಡಬಹುದಾದ ಖರ್ಚುವೆಚ್ಚ ಮುಂತಾದ ನೀತಿ ನಿಯಮಗಳು ಈ ಅಧಿಸೂಚನೆಯಲ್ಲಿದೆ.
* ಉಡುಪಿ ಜಿಲ್ಲಾಧಿಕಾರಿ ಡಾ.ಎಂ. ಟಿ.ರೇಜು ಚುನಾವಣಾಧಿಕಾರಿ
* ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಿ.ಕೆ. ರಂಗಸ್ವಾಮಿ ಹೆಚ್ಚುವರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
* ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ 8 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.
* ಮಾ.18ರಂದು ಮತದಾನ ನಡೆಯಲಿದೆ. ಫೆ.29ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ.
* ಫೆ.23 ರಿಂದ ಫೆ.29ರವರೆಗೆ ಪ್ರತಿದಿನ ಪೂರ್ವಾಹ್ನ 11 ರಿಂದ ಅಪರಾಹ್ಣ 3 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ
* ಮಾ.1ರಂದು ಮತಪತ್ರಗಳ ಪರಿಶೀಲನೆ ನಡೆಯಲಿದೆ.
* ಮಾ.3 ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನ.
* ಮಾ.18ರಂದು ಮತದಾನ ನಡೆಯಲಿದೆ.
* ಮಾ.21ರಂದು ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತಗಳ ಎಣಿಕೆ ನಡೆಯಲಿದೆ ಎಂದು ಡಾ.ರೇಜು ಹೇಳಿದ್ದಾರೆ.
ಮತದಾರರ ಅಂಕಿ ಅಂಶ: ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ವಿಧಾನ ಸಭಾ ಕ್ಷೇತ್ರಗಳು ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಗೆ ಸೇರಿದೆ.
* ಈಗಿರುವ ದಾಖಲೆಗಳಂತೆ ಒಟ್ಟು 12,45,266 ಮತದಾರರನ್ನು ಈ ಕ್ಷೇತ್ರ ಒಳಗೊಂಡಿದೆ.
* ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳದವರು ಫೆ.23ರವರೆಗೆ ತಮ್ಮ ಹೆಸರನ್ನು ಸೇರಿಸಲು ಅವಕಾಶವನ್ನು ನೀಡಲಾಗಿದೆ.
* ಮತದಾರರ ಅಂತಿಮ ಪಟ್ಟಿಯನ್ನು ಫೆ.29ರಂದು ಪ್ರಕಟಿಸಲಾಗುವುದು
* 1510 ಮತಗಟ್ಟೆ: ಈಗ ಮಾಡಲಾಗಿರುವ ಅಂದಾಜಿನಂತೆ ಒಟ್ಟು 1510 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.
* ಉಡುಪಿ ಜಿಲ್ಲೆಯಲ್ಲಿ 649 ಹಾಗೂ ಚಿಕ್ಕಮಗಳೂರು ಜಿಲ್ಲೆ ಯಲ್ಲಿ 861 ಮತಗಟ್ಟೆಗಳಿವೆ.
* ಪ್ರತಿ 1,300 ಮತದಾರರಿಗೆ ಒಂದರಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ
ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ವಿವರ ಹೀಗಿದೆ: ಕುಂದಾಪುರ-178, ಉಡುಪಿ-166, ಕಾಪು-147, ಕಾರ್ಕಳ-158, ಶೃಂಗೇರಿ-248, ಮೂಡಿಗೆರೆ-205, ಚಿಕ್ಕಮಗಳೂರು-199, ತರೀಕೆರೆ-209.
* ಚುನಾವಣಾ ಆಯೋಗದ ನಿರ್ದೇಶನದಲ್ಲಿ ತಿಳಿಸಿದಂತೆ ಈ ಉಪಚುನಾವಣೆಯಲ್ಲೂ ಭಾವಚಿತ್ರವನ್ನೊಳಗೊಂಡ ಮತದಾರರ ಗುರುತು ಚೀಟಿ ಮತದಾನಕ್ಕೆ ಕಡ್ಡಾಯವಾಗಿದೆ.
* ಅಥವಾ ಈಗಾಗಲೇ ಅಂಗೀಕರಿಸಲಾದ 16 ದಾಖಲೆಗಳಲ್ಲಿ ಒಂದನ್ನು ಬಳಸಬಹುದು.
ಭದ್ರತಾ ವ್ಯವಸ್ಥೆ: 2009ರಲ್ಲಿ ಈ ಕ್ಷೇತ್ರದಲ್ಲಿ 1,593 ಮತಗಟ್ಟೆಗಳಿದ್ದು, ಇವುಗಳಲ್ಲಿ 573 ಸಾಮಾನ್ಯ, 759 ಸೂಕ್ಷ್ಮ ಹಾಗೂ 261 ಅತಿಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿತ್ತು. ಈ ಬಾರಿ ಇನ್ನೆರಡು ದಿನಗಳಲ್ಲಿ ಅವುಗಳನ್ನು ವಿಭಾಗೀಕರಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ.ಬೋರಲಿಂಗಯ್ಯ ತಿಳಿಸಿದರು.
* ಮಾ.18ರಂದು 1,500 ಪೊಲೀಸ್ ಸಿಬ್ಬಂದಿ ಹಾಗೂ 6,000 ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ನೀತಿ ಸಂಹಿತೆ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷ ಗಳು ಹಾಗೂ ಅಭ್ಯರ್ಥಿಗಳು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚುನಾವಣಾಧಿ ಕಾರಿ ಡಾ.ರೇಜು ಮನವಿ ಮಾಡಿದ್ದಾರೆ.
ಈ ಬಾರಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಚುನಾವಣೆಗಾಗಿ ಮಾಡುವ ಖರ್ಚುಗಳ ಮಿತಿಯನ್ನು 25 ಲಕ್ಷ ರೂ. ಗಳಿಂದ 40 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ರೇಜು ಹೇಳಿದರು.












Click it and Unblock the Notifications