ಸುನಿಲ್ vs ಉದಯ್, ಬಿಜೆಪಿ ಟಿಕೆಟ್ ಯಾರಿಗೆ?
ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಅನಧಿಕೃತವಾಗಿ ಆರಂಭವಾಗಿದ್ದ ಅಭ್ಯರ್ಥಿ ಹುಡುಕಾಟ ಈಗ ಅಧಿಕೃತವಾಗಿ ಆರಂಭವಾಗಿದೆ.
ಮೂಲಗಳ ಪ್ರಕಾರ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ವಿ.ಸುನೀಲ್ ಕುಮಾರ್ ಅವರ ಪರ ಸದಾನಂದ ಗೌಡ ಹಾಗೂ ಅನಂತ್ ಬಣ ಬ್ಯಾಟಿಂಗ್ ಆರಂಭಿಸಿದೆ. ಆದರೆ, ಇತ್ತೀಚೆಗೆ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಉದಯ್ ಕುಮಾರ್ ಶೆಟ್ಟಿ ಪರ ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಮಾತನಾಡಿದ್ದರು. ಸುನೀಲ್ ಗೆ ಟಿಕೆಟ್ ಸಿಗದಿದ್ದರೆ ಒಂದಷ್ಟು ಬಂಡಾಯ, ಅಸಮಾಧಾನ ಕಟ್ಟಿಟ್ಟ ಬುತ್ತಿ.
ಜಾತಿ ಲೆಕ್ಕಾಚಾರ ಪ್ರಮುಖವಾಗಿರುವುದರಿಂದ ಸೂಕ್ಷ್ಮವಾಗಿ ಪರಿಶೀಲಿಸಿದರೆ ಉದಯ್ ಗಿಂತ ಸುನೀಲ್ ಪರ ಹೆಚ್ಚು ಬೆಂಬಲ ಸಿಗಲಿದೆ. ಎರಡೂ ಜಿಲ್ಲೆ ಪರಿಚಿತನಾಗಿರುವ ಸುನೀಲ್ ಗೆ ಬಿ ಫಾರಂ ಸಿಗಲಿದೆ ಎಂದು ಅವರ ಅಭಿಮಾನಿಗಳು ನಂಬಿದ್ದಾರೆ.
ಉಳಿದಂತೆ
ಬಿಜೆಪಿ
ಟಿಕೆಟ್
ಗಾಗಿ
ಲಾಬಿ
ನಡೆಸುತ್ತಿರುವ
ಹೆಸರುಗಳೂ
ಈ
ರೀತಿ
ಇದೆ:
1.
ಕಾರ್ಕಳ
ವಿಧಾನಸಭಾ
ಕ್ಷೇತ್ರದ
ಮಾಜಿ
ಶಾಸಕ
ಮತ್ತು
ಬಿಜೆಪಿ
ಯುವಮೋರ್ಚಾದ
ಅಧ್ಯಕ್ಷ
ಸುನಿಲ್
ಕುಮಾರ್.
2.
ಚಿಕ್ಕಮಗಳೂರು
ಜಿಲ್ಲೆ
ಬಿಜೆಪಿ
ಅಧ್ಯಕ್ಷರಾಗಿರುವ
ಪ್ರಾಣೇಶ್
3.
ಉಡುಪಿ
ಜಿಲ್ಲೆ
ಬಿಜೆಪಿ
ಅಧ್ಯಕ್ಷ
ಉದಯ್
ಕುಮಾರ್
ಶೆಟ್ಟಿ
4.
ಬಂಜಾರ
ಹೋಟೆಲ್
ಮಾಲೀಕ
ಪ್ರಕಾಶ್
ಶೆಟ್ಟಿ
ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ಒಕ್ಕಲಿಗ ಹಾಗೂ ಬಿಲ್ಲವ ಸಮುದಾಯ ಮತ ಒಲಿಸಿಕೊಂಡರೆ ಎರಡೂ ಜಿಲ್ಲಯಲ್ಲಿ ಪಾರುಪತ್ಯ ನಡೆಸಬಹುದು ಎಂಬ ಎಣಿಕೆ ಎಲ್ಲಾ ಪಕ್ಷಗಳನ್ನು ಇದೆ.