ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮದಾಸ್ ಗೆ ವಿಮಾನ ನಿಲ್ದಾಣ ನೆನಪ್ಯಾಕೆ ಬಂತು..?

By Mahesh
|
Google Oneindia Kannada News

SA Ramdas
ಮೈಸೂರು, ಫೆ.5: ಮೈಸೂರು – ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದ ಬಗ್ಗೆ ಜನತೆಗೆ ಭಾರಿ ನಿರೀಕ್ಷೆಗಳಿತ್ತು. ಅದರ ಜೊತೆಗೆ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗೂ ಆಶಾದಾಯಕವಾಗಿತ್ತು. ಭೂ ವ್ಯವಹಾರಗಳ ಡೀಲ್ ಮುಕ್ತಾಯಗೊಳಿಸಲು ವಿಮಾನ ನಿಲ್ದಾಣ ರೀ ಓಪನ್ ಆಗಬೇಕಿರುವುದು ಕೂಡಾ ಎನ್ನಲಾಗಿದೆ.

ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸೇವೆಯನ್ನು ಆರಂಭಿಸಿದ ಮೇಲೆ ಸರ್ಕಾರ ಯಾವುದೇ ಸಹಕಾರ ನೀಡಿರಲಿಲ್ಲ. ಸಾವಿರಾರು ಕೋಟಿ ಸಾಲ ಹೊತ್ತುಕೊಂಡಿರುವ ಕಿಂಗ್ ಫಿಷರ್ ಸಂಸ್ಥೆಗೆ ಇಂಧನ ಖರೀದಿಯಲ್ಲಿ ರಾಜ್ಯ ಸರಕಾರ ಸಬ್ಸಿಡಿ ನೀಡಲಿಲ್ಲ. ನಷ್ಟದಲ್ಲಿ ವಿಮಾನ ಹಾರಿಸಲು ಇಚ್ಛೆಪಡದ ಕಿಂಗ್ ಫಿಷರ್ ಸಂಸ್ಥೆ ತನ್ನ ವಿಮಾನ ಯಾನ ಸೇವೆ ಸ್ಥಗಿತಗೊಳಿಸಿತು.

ರಾಮದಾಸ್ ಹೇಳಿಕೆಗೆ ಏನು ಕಾರಣ?: ಮೈಸೂರು ವಿಮಾನ ನಿಲ್ದಾಣ ಕಾರ್ಯರಂಭಕ್ಕೆ ಈಗಾಗಲೇ ಕೋಟ್ಯಾಂತರ ರೂ. ವೆಚ್ಚ ಮಾಡಲಾಗಿದೆ. ಜತೆಗೆ ಯೋಜನೆ ಆರಂಭದಲ್ಲಿ ಉದ್ದೇಶಿಸಿದಂತೆಯೇ ಎರಡನೇ ಹಂತದ ಕಾಮಗಾರಿ ಆರಂಭಿಸಲು ಸರ್ವ ಸಿದ್ಧತೆಯಾಗಿದೆ.

ಎರಡನೇ ಹಂತಕ್ಕೆ ಅಗತ್ಯವಿರುವ ಜಮೀನು ಸ್ವಾದೀನ ಪಡಿಸಿಕೊಳ್ಳುವುದು ಹಾಗೂ ಅಗತ್ಯ ಮೂಲ ಸವಲತ್ತು ಕಲ್ಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಫೆ.8 ರಂದು ಸಿಎಂ ಸದಾನಂದ ಗೌಡರ ಜೊತೆ ಮಾತುಕತೆ ನಡೆಸಲಿರುವ ರಾಮದಾಸ್ ಅವರು ಮುಂದಿನ ಯೋಜನೆಯ ನೀಲನಕ್ಷೆ ಪ್ರಕಟಿಸುವ ನಿರೀಕ್ಷೆಯಿದೆ.

ಕಿಂಗ್ ಫಿಷರ್ ಸದ್ಯಕ್ಕೆ ಮೈಸೂರು ಕಡೆ ಬರುವುದಿಲ್ಲವಾದ್ದರಿಂದ ಇತರೆ ಖಾಸಗಿ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ. ಆದರೆ, ಅದಕ್ಕೂ ಮುನ್ನ ಸ್ಥಳೀಯ ರಿಯಲ್ ಎಸ್ಟೇಟ್ ಬಿಲ್ಡರ್ ಗಳ ಜೊತೆ ಟೇಪು ಹಿಡಿದು ಜಾಗ ಅಳತೆ ಮಾಡುತ್ತಿರುವ ಸರ್ಕಾರದ ಕ್ರಮ ಪ್ರಶ್ನಾರ್ಹವಾಗಿದೆ. ಬಿಲ್ಡರ್ ಗಳ ಒತ್ತಡಕ್ಕೆ ಮಣಿದು, ವಿ ನಿಲ್ದಾಣಕ್ಕೆ ಚಾಲನೆ ನೀಡುವ ಎಲ್ಲ ಪ್ರಯತ್ನಗಳು ನಡೆದಿದೆ.

English summary
Mysore in charge minister SA Ramdas has assured re open of Mandakalli Airport, Mysore. Ramdas more concerned about Airport II stage work which involves heavy land deals. The major operator Kingfisher Airlines has stopped its service couple of months back. Minister Ramdas assurance will not become real soon as no operators available to run Chennai-Bangalore-Mysore flights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X