ಆಂಧ್ರ ಐಎಎಸ್ ಆಚಾರ್ಯ ಸೆರೆ:ಜಗನ್ ಗೆ ಭಾರಿ ಹಿನ್ನಡೆ

ಒಂದು ವಾರದ ಹಿಂದೆ ಇದೇ ಪ್ರಕರಣದಲ್ಲಿ ಜಗನ್ ಭಾವಮೈದುನ ಸುನಿಲ್ ರೆಡ್ಡಿಯನ್ನು ಬಂಧಿಸಲಾಗಿತ್ತು. ಇದೀಗ ಆಡಳಿತಾತ್ಮಕವಾಗಿ ಎಮ್ಮಾರ್ ಟೌನ್ಶಿಪ್ ಹಗರಣದ ರೂವಾರಿಯೆನ್ನಲಾದ ಆಚಾರ್ಯ ಬಂಧನ ಜಗನ್ ಗೆ ಭಾರಿ ಹಿನ್ನಡೆ ತಂದಿದೆ.
ವಿಚಾರಣೆಗಾಗಿ ಸೋಮವಾರ ಬೆಳಗ್ಗೆಯೇ ಆಚಾರ್ಯ ಅವರನ್ನು ಹೈದರಾಬಾದ್ಗೆ ಕರೆಯಿಸಿಕೊಂಡಿದ್ದ ಸಿಬಿಐ, ಮಧ್ಯಾಹ್ನದ ವೇಳೆಗೆ ಅವರನ್ನು ವಶಕ್ಕೆ ತೆಗೆದುಕೊಂಡಿತೆಂದು ಮೂಲಗಳು ತಿಳಿಸಿವೆ. ಈ ಟೌನ್ಶಿಪ್ನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಆಂಧ್ರ ಪ್ರದೇಶ ಕೈಗಾರಿಕಾ ಮೂಲ ಸೌಕರ್ಯ ನಿಗಮ (ಎಪಿಐಐಸಿ) ಮತ್ತು ದುಬೈನ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಾದ ಎಮ್ಮಾರ್ ಜಂಟಿಯಾಗಿ ನಿರ್ಮಿಸಿದ್ದವು. 1983ರ ತಂಡದ ಐಎಎಸ್ ಅಧಿಕಾರಿ ಬಿಪಿ ಆಚಾರ್ಯ ಈ ಯೋಜನೆ ಅನುಷ್ಠಾನ ಸಮಯದಲ್ಲಿ ಎಪಿಐಐಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.











Click it and Unblock the Notifications