ಮುಜರಾಯಿ ದೇಗುಲಗಳಿಗೆ ಇ ಬುಕ್ಕಿಂಗ್ ವ್ಯವಸ್ಥೆ

Kukke Subramanya Temple
ಬೆಂಗಳೂರು, ಜ.25: ಮುಜರಾಯಿ ಇಲಾಖೆಗೆ ಒಳಪಡುವ ರಾಜ್ಯದ ಎಲ್ಲಾ ಪ್ರಮುಖ ದೇವಸ್ಥಾನಗಳನ್ನು ಇ ಜಾಲಕ್ಕೆ ಒಳಪಡಿಸಲಾಗುವುದು. ಎಲ್ಲಾ ದೇಗುಲಗಳ ಸೇವಾ ಕಾರ್ಯಕ್ರಮಗಳ ಪಟ್ಟಿಗಳೊಂದಿಗೆ ಇ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಪ್ರಕಟಿಸಿದರು.

ಮುಜರಾಯಿ ಇಲಾಖೆಯ ನೂತನ ವೆಬ್ ತಾಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡ ಅವರು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೊಠಡಿ ಬುಕ್ಕಿಂಗ್, ಸೇವೆ ಕಾಯ್ದಿರಿಸುವಿಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ವೆಬ್ ತಾಣ ಕಲ್ಪಿಸಲಿದೆ. ವಿವಿಧ ಸೇವಾ ಕಾರ್ಯಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ 60 ಕೋಟಿ ರು.ಗಳನ್ನು ನೀಡಿದೆ ಎಂದು ಹೇಳಿದರು.

ದೇವಾಲಯಗಳು ನೆಮ್ಮದಿ ಕೇಂದ್ರಗಳಾಗಿದೆ, ರೆಸಾರ್ಟ್ ಗಳಂತೆ ಕೇವಲ ಮನರಂಜನಾ ಕೇಂದ್ರಗಳಲ್ಲ. ಶ್ರದ್ಧಾಭಕ್ತಿಯ ಕೇಂದ್ರಗಳಾದ ದೇಗುಲಗಳ ಅಭಿವೃದ್ಧಿ ನಮ್ಮ ಸರ್ಕಾರ ಮೂರುವರೆ ವರ್ಷಗಳಿಂದ ಹೆಚ್ಚಿನ ಒತ್ತು ನೀಡಿದೆ ಎಂದರು.

ಕುಕ್ಕೆ ಸುಬ್ರಮಣ್ಯ ಹಾಗೂ ಮಲೈ ಮಹದೇಶ್ವರ ದೇಗುಲಗಳಲ್ಲಿ ಸಂಪೂರ್ಣ ಸೇವೆಗಳು ಲಭ್ಯವಿದೆ. ಮುಜರಾಯಿ ಇಲಾಖೆ ಆವರಣದಲ್ಲಿ ಬೆಂಗಳೂರು ಒನ್ ಕೇಂದ್ರವನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮುಜರಾಯಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಾಲೂರು ಕೃಷ್ಣಯ್ಯ ಶೆಟ್ಟಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+