ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಹುಚ್ಚುಮಾಸ್ತಿಗೌಡನ ಬೇಟೆಯಾಡಿದ ಲೋಕಾಯುಕ್ತ

By * ಚ.ಶ್ರೀನಿವಾಸಮೂರ್ತಿ, ಕೋಲಾರ
|
Google Oneindia Kannada News

Hucchumasti Gowda
ಶ್ರೀನಿವಾಸಪುರ : ಜ. 24 : ನಾಲ್ಕುವರೆ ಸಾವಿರ ರು. ಲಂಚ ಪಡೆಯುತ್ತಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಇಬ್ಬರು ಭ್ರಷ್ಟ ಸರ್ವೆ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಸೋಮವಾರ ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ. ಅವರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಚ್ಚುಮಾಸ್ತಿಗೌಡ ಹಾಗು ವೆಂಕಟೇಶ್ ಎಂಬಿಬ್ಬ ಸರ್ವೆಯರುಗಳು ಕೋಲಾರ ತಾಲೂಕಿನ ನರಸಾಪುರದ ಗೋಪಿ ಎನ್ನುವರಿಂದ ಲಂಚ ಪಡೆಯುವ ಸಂದರ್ಭದಲ್ಲಿ ಕೋಲಾರದ ಲೋಕಾಯುಕ್ತ ವೃತ್ತ ನಿರೀಕ್ಷಕ ಮಂಜುನಾಥ ಹಾಗು ಲೊಕೇಶ ನಡಸಿದ ಕಾರ್ಯಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ತಾಲೂಕಿನ ಕಸಬಾ ಹೋಬಳಿ ಮಾಸ್ತೇನಹಳ್ಳಿ ಗ್ರಾಮದ ಸರ್ವೆ ನಂ 2/5 ನಲ್ಲಿನ 27 ಕುಂಟೆ ಜಮೀನಿಗೆ ಸಂಬಂಧಿಸಿದಂತೆ ಮೂರು ಭಾಗದ ಸರ್ವೆ ಸ್ಕೇಚ್ ನೀಡುವ ವಿಷಯದಲ್ಲಿಗೋಪಿಯವರಿಂದ 6 ಸಾವಿರ ಹಣ ಕೇಳಿದ್ದರು. ಇದರಲ್ಲಿ ಮುಂಗಡವಾಗಿ 1.5 ಸಾವಿರ ಪಡೆದಿದ್ದರು. ಉಳಿದ ಹಣವನ್ನು ಕಚೇರಿಯಲ್ಲಿ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.

English summary
Two corrupt survey officers were trapped red handed by lokayukta while accepting bribe of 4.5 thousand rupees. Both have been remanded to judicial custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X