ಮುಸ್ಲೀಮರಿಗೆ ಮೀಸಲಾತಿ, ದೇಶಕ್ಕೆ ಕೆಡಕು: ಮೋದಿ

ಇತರೆ ಹಿಂದುಳಿದ ವರ್ಗ (ಒಬಿಸಿ) ಶೇ.27ರ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಶೇ.4.5 ಮೀಸಲಾತಿ ಕಲ್ಪಿಸುವ ಯುಪಿಎ ಸರ್ಕಾರದ ಉದ್ದೇಶಿತ ನಿರ್ಧಾರದ ವಿರುದ್ಧ ಈಗಾಗಲೇ ವಿಶ್ವ ಹಿಂದೂ ಪರಿಷತ್ ತಿರುಗಿ ಬಿದ್ದಿದೆ.
ಯುಪಿಎ ಸರ್ಕಾರ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಧರಣಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಮತ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅತ್ಯಂತ ಕೆಟ್ಟ ಕ್ರಮವಾಗಿದೆ. ಸಮಾಜದ ಆರೋಗ್ಯಮಯ ವಾವಾವರಣವನ್ನು ಕೆದಡುವ ಯತ್ನದಲ್ಲಿರುವ ಕಾಂಗ್ರೆಸ್ ಗೆ ಎಂದೂ ಜಯ ಸಿಗುವುದಿಲ್ಲ.
ನಾನು ಕೂಡಾ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವನು. ಆದರೆ, ನಾನು ಎಂದು ನನ್ನ ಸಮುದಾಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿಲ್ಲ ಎಂದು ನರೇಂದ್ರ ಮೋದಿ ಹೇಳಿದರು.












Click it and Unblock the Notifications