ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಯಡಿಯೂರಪ್ಪರನ್ನು ಉಚ್ಚಾಟಿಸಿ

By Mahesh
|
Google Oneindia Kannada News

BS Yeddyurappa
ಮೈಸೂರು, ಜ.8: 'ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿರಬೇಕು ಆದರೆ, ಇವರು ಕುರ್ಚಿಗೆ ನಿಷ್ಠರಾಗಿದ್ದಾರೆ. ಯಡಿಯೂರಪ್ಪ ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ ಎಂದು ಬೊಗಳು ಹೊಡೆಯುತ್ತಾರೆ. ಆದರೆ ನಿಷ್ಠೆ ಏನು ಎಂಬುದು ಎಲ್ಲರಿಗೂ ತಿಳಿದಿದೆ.ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕು' ಎಂದು ಬಿಜೆಪಿ ಹಿರಿಯ ಕಾರ್ಯಕರ್ತರ ವೇದಿಕೆ ಒಕ್ಕೊರಲಿನಿಂದ ಆಗ್ರಹಿಸಿದೆ.

ಮೈಸೂರಿನಲ್ಲಿ ಭಾನುವಾರ ಸಭೆ ಸೇರಿದ್ದ ಬಿಜೆಪಿಯ ಹಿರಿಯ ನಾಯಕರ ಸಭೆಯಲ್ಲಿ ಸಿಎಂ ಸದಾನಂದ ಗೌಡರ ಗುರುಗಳಾದ ರಾಮಭಟ್ ಹಾಗೂ ಮಾಜಿ ಶಾಸಕ ಬಿಬಿ ಶಿವಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಯಡಿಯೂರಪ್ಪ ಅವರು ಬೇಕಾದರೆ ಹೊಸ ಪಕ್ಷ ಕಟ್ಟಲಿ ಆದರೆ, ಬಿಜೆಪಿಯಲ್ಲೇ ಇದ್ದು ಪಕ್ಷ ಕೊಳೆಯುವಂತೆ ಮಾಡುವುದು ಬೇಡ. ಪಕ್ಷದ ಆಂತರಿಕ ಬಿಕ್ಕಟ್ಟು, ಭ್ರಷ್ಟಾಚಾರಕ್ಕೆ ಯಡಿಯೂರಪ್ಪ ಅವರೇ ಪ್ರಧಾನ ಕಾರಣ.

ಯಡಿಯೂರಪ್ಪ ಅವರಿಂದ ಯಾರಿಗೂ ಉಳಿಗಾಲವಿಲ್ಲ. ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಿಜೆಪಿ ಬೆಳೆಯಬೇಕಿಲ್ಲ. ಪಕ್ಷದಿಂದ ಕೂಡಲೇ ಉಚ್ಚಾಟಿಸುವಂತೆ ಹೈಕಮಾಂಡ್ ಗೆ ಆಗ್ರಹಿಸುತ್ತೇವೆ ಎಂದು ರಾಮ್ ಭಟ್ ಹೇಳಿದರು.

English summary
Expel former CM Yeddyurappa from BJP, He is big bane to party, BSY will divide party if no action is taken soon said Ram bhat senior BJP member in Mysore. Former MLA BB Shivappa and other Senior leader urged Yeddyurappa and his supporters should be evicted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X