ಕರವೇ ಒಳಜಗಳ ಬಹಿರಂಗ : ಗೌಡರ ಸಂದರ್ಶನ

ಈ ಕುರಿತು ಹೆಚ್ಚಿನ ವಿವರಗಳಿಗಾಗಿ ನಮ್ಮ ವರದಿಗಾರರು ನಾರಾಯಣ ಗೌಡರನ್ನು ಸಂಪರ್ಕಿಸಿದರು. ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದ ಗೌಡರು, ತಮ್ಮ ಬಗ್ಗೆ ಪ್ರಕಟಿಸಲಾದ ಬಿಸಿಬಿಸಿ ಸುದ್ದಿಗೆ ಸ್ಪಷ್ಟೀಕರಣ ನೀಡಿದರು. ಅದರ ಸಾರಾಂಶ ಇಂತಿದೆ, ಓದಿ - ಸಂಪಾದಕ.
ಕರವೇ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಸನ್ನ ಸಂಘಟನೆಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿದ ವ್ಯಕ್ತಿ. ಕರವೇ ಹೆಸರು ಹೇಳಿಕೊಂಡು ಹಣ ವಸೂಲಿಗೆ ನಿಂತ ಸಂಘಟನೆಯ ದ್ರೋಹಿ. ಈತ ಮಾಡಬಾರದ್ದೆಲ್ಲ ಮಾಡಿ ಈಗ ನನ್ನನ್ನೇ ಉಚ್ಛಾಟಿಸಿರುವುದಾಗಿ ಹೇಳಿಕೆ ನೀಡಿದ್ದಾನೆ. ಉಚ್ಛಾಟನೆ ಮಾಡುವುದಕ್ಕೆ ಅಸಲು ಅವರಿಗೆ ಅಧಿಕಾರವೇ ಇಲ್ಲ.
ಕೋಲಾರದಲ್ಲಿ ಪ್ರಸನ್ನ ಆಡಿದ ಕನ್ನಡದ ಆಟಗಳು ಇಡೀ ಕನ್ನಡ ಸಂಘಟನೆಗೆ ಅಗೌರವ, ಅವಮಾನ ತರುವಂಥದ್ದಾಗಿದೆ. ಈತ ಕೋಲಾರ ಜಿಲ್ಲೆಯ ಜಲ್ಲಿ ಕ್ರಷರ್ ಮಾಲಿಕರ ಬಳಿ ಹೋಗಿ ಅವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ವಿನಾಯಕ ಜಲ್ಲಿ ಕ್ರಷರ್ ಕಂಪನಿಯಿಂದ ನನಗೆ ನೇರವಾಗಿ ದೂರು ಕೂಡ ಬಂದಿದೆ.
ಇದು ಒಂದು ಉದಾಹರಣೆಯಷ್ಟೆ. ಕನ್ನಡ ಮತ್ತು ಕರವೇ ಹೆಸರು ಹೇಳಿಕೊಂಡು ನಾಚಿಕೆಗೆಟ್ಟ ಕೆಲಸಕ್ಕೆ ಇಳಿದ ಇಂತಹ ವ್ಯಕ್ತಿಯ ಬಗ್ಗೆ ಹೆಚ್ಚು ಮಾತನಾಡಿ ನನ್ನ ನಾಲಿಗೆಯನ್ನು ಮಲಿನಗೊಳಿಸುವುದಿಲ್ಲ. ಆದ್ದರಿಂದಲೇ, ನಾವು ಇಂದು ಇಲ್ಲಿ ಸಭೆ ಸೇರಿದ್ದೇವೆ.
28 ಜಿಲ್ಲೆಗಳನ್ನು ಪ್ರತಿನಿಧಿಸುವ ಕರವೇ ಅಧ್ಯಕ್ಷರುಗಳು, 16 ಮಂದಿ ರಾಜ್ಯಮಟ್ಟದ ಪದಾಧಿಕಾರಿಗಳು ತುರ್ತು ಸಭೆ ಸೇರಿ ಜಯದೇವ ಪ್ರಸನ್ನ ಅವರನ್ನು ಕರವೇಯಿಂದ ವಿಧ್ಯುಕ್ತವಾಗಿ ಹೊರದಬ್ಬುವ ನಿರ್ಧಾರವನ್ನು ಕೈಗೊಂಡಿದ್ದೇವೆ.
ಈ ಮೂಲಕ ಸಮಸ್ತ ಕನ್ನಡಿಗರಿಗೆ ತಿಳಿಯಪಡಿಸುವುದೇನೆಂದರೆ, ಇನ್ನು ಮುಂದೆ ಕರವೇ ಸಂಘಟನೆಗೂ ಜಯದೇವ ಪ್ರಸನ್ನ ಅವರಿಗೂ ಮತ್ತು ಅವರ ಹಿಂಬಾಲಕರಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಇವರ ಯಾವುದೇ ನಡೆ ಮತ್ತು ನುಡಿಗೂ ಕರವೇ ಸಂಘಟನೆ ಜವಾಬ್ದಾರ ಆಗಿರುವುದಿಲ್ಲ.
ಪ್ರಸನ್ನ ಕಷ್ಟಕಾಲದಲ್ಲಿದ್ದಾಗ ಐದಾರು ಲಕ್ಷ ಹಣ ಕೊಟ್ಟು ಅವನಿಗೆ ಮನೆ ಕಟ್ಟಿಸಿಕೊಟ್ಟಿದ್ದೆ. ಅವನ ಕನ್ನಡ ಪ್ರೀತಿಗೆ ಮಾರು ಹೋಗಿ ಅವನಿಗೆ ಸಾಧ್ಯವಾದ ಎಲ್ಲ ನೆರವನ್ನೂ ಕೊಡುತ್ತಿದ್ದೆ. ಸಂಘಟನೆಯನ್ನು ಬೆಳೆಸುವುದಕ್ಕೆ ತೀರ ಅಗತ್ಯವಾದ ಖರ್ಚುವೆಚ್ಚಗಳಿಗಾಗಿ ತಿಂಗಳಿಗೆ 25 ಸಾವಿರ ರು. ಕೊಡುತ್ತಿದ್ದೆ.
ಆದರೆ, ನಂಬಿಕೆ, ದ್ರೋಹ ಮಾಡಿದ ಪ್ರಸನ್ನ ಕನ್ನಡವನ್ನೂ ಮರೆತ, ಕರವೇಯನ್ನೂ ಕಡೆಗಣಿಸಿದ. ಕೇವಲ ಹಣವೇ ಆತನಿಗೆ ಮುಖ್ಯವಾಗುವ ಚಟ ಆರಂಭವಾಗಿ ತನ್ನ ಗುಂಡಿಯನ್ನು ಈಗ ತಾನೇ ತೋಡಿಕೊಂಡಿದ್ದಾನೆ. ಇದು ಕರವೇಗೆ ಮಾತ್ರವಲ್ಲ ಕನ್ನಡ ನಾಡಿಗೆ ಆತ ಮಾಡಿದ ದ್ರೋಹವಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾರನ್ನೂ ಕರವೇ ಕ್ಷಮಿಸುವುದಿಲ್ಲ ಎಂದು ಹೇಳಿ ನಾರಾಯಣ ಗೌಡರು ಫೋನ್ ಆಫ್ ಮಾಡಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications