ಶ್ರೀಲಕ್ಷ್ಮಿಗೆ ಬೇಲ್ ಸಿಗೋದು ಮೊದಲೇ ಗೊತ್ತಿತ್ತೇ?

Srilakshmi gets bail
ಹೈದರಾಬಾದ್ , ಡಿ.5: ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಓಬಳಾಪುರಂ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜೈಲು ಸೇರಿದ್ದ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷ್ಮಿಗೆ ಶುಕ್ರವಾರ(ಡಿ.2) ಸಿಬಿಐ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ, ತ್ವರಿತವಾಗಿ ಜಾಮೀನು ಸಿಗುವ ಮುನ್ಸೂಚನೆ ಶ್ರೀಲಕ್ಷ್ಮಿಗೆ ಮೊದಲೇ ಇತ್ತು ಎನ್ನುವ ಕುತೂಹಲಕಾರಿ ಸಂಗತಿ ಹೊರಬಿದ್ದಿದೆ.

ಸಿಬಿಐ ವಶದಲ್ಲಿ ಮೂರು ದಿನಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದ ಶ್ರೀಲಕ್ಷ್ಮಿ, ಚಂಚಲಗೂಡ ಜೈಲು ಸೇರಿ ವಿಚಾರಣಾಧೀನ ಕೈದಿ ಸಂಖ್ಯೆ 4332 ಪಡೆದ ಕೆಲ ಗಂಟೆಗಳ ನಂತರ ಜೈಲಿನಿಂದ ಹೊರಬಿದ್ದಿದ್ದರು.

ಪ್ರಭಾವಿ ನಾಯಕ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ಅವರು ಜೈಲಿನಲ್ಲೇ ಕಾಲದೂಡುತ್ತಿರುವ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಪಾತ್ರಧಾರಿಯಾದರೂ ಶ್ರೀಲಕ್ಷ್ಮಿಗೆ ಜಾಮೀನು ನೀಡಲು ಕಾರಣವೇನು ಎಂಬುದರ ಬಗ್ಗೆ ಚರ್ಚೆ ನಡೆದಿದೆ.

ಮೊದಲಿಗೆ ಪ್ರತಿಭಾವಂತ ಮಹಿಳಾ ಅಧಿಕಾರಿ, ಅನಾರೋಗ್ಯ ಪೀಡಿತೆ ಹಾಗೂ ತನಿಖೆ ಕಳೆದ ವರ್ಷದಿಂದ ನಡೆದಿದ್ದು, ಚಾರ್ಜ್ ಶೀಟ್ ಸಲ್ಲಿಸುವ ಹಂತ ತಲುಪಿದೆ ಹಾಗೂ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂಬ ಅಂಶಗಳನ್ನು ಮನಗಂಡು ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಜೈಲಿಗೆ ಹೋದ ಶ್ರೀಲಕ್ಷ್ಮಿ ತನ್ನೊಟ್ಟಿಗೆ ಯಾವುದೇ ಉಡುಗೆ ತೊಡುಗೆಯನ್ನು ಕೊಂಡೊಯ್ದಿರಲಿಲ್ಲ. ಐಪಿಎಸ್ ಪತಿ ಜಗದೀಶ್ ಆಗಲಿ ಇತರೆ ಸಂಬಂಧಿಕರಾಗಲಿ ಜೈಲಿಗೆ ಬಂದು ರೋದಿಸಿದ ದೃಶ್ಯ ದಾಖಲಾಗಿಲ್ಲ. ಹೀಗೆ ಬಂದು ಹಾಗೆ ಹೋದ ಹಾಗೆ ಶ್ರೀಲಕ್ಷ್ಮಿ ಅವರು ಜೈಲಿಗೆ ಹೋಗಿ ಬಂದ ಶಾಸ್ತ್ರ ಮುಗಿಸಿದ್ದಾರೆ.

ಇನ್ನೂ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯಲು ಸಿಎಂ ಕಿರಣ್ ಕುಮಾರ್ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿಯಿದೆ. ಈ ಕಾರಣ ಕೂಡಾ ಜೈಲಿನಿಂದ ಹೊರಬೀಳಲು ಸಹಾಯಕವಾಗಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+