ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಎಂಸಿ ಗಣಿ ಅಕ್ರಮ, ಸಿಬಿಐನಿಂದ ಸಬಿತಾಗೆ ಕ್ಲೀನ್ ಚಿಟ್

By Mahesh
|
Google Oneindia Kannada News

Sabitha Indra Reddy
ಹೈದರಾಬಾದ್, ಡಿ.2: 'ಹಣ್ಣು ತಿಂದವರು ಎಸ್ಕೇಪ್, ಸಿಪ್ಪೆ ತಿಂದವರು ಸಿಕ್ಕಿಬಿದ್ರು' ಎಂಬ ಶೀರ್ಷಿಕೆ ಅಡಿಯಲ್ಲಿ ಬಂದ ಸುದ್ದಿ ನಿಜವಾಗಿದೆ. ಓಎಂಸಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹಾಲಿ ಗೃಹ ಸಚಿವೆ ಸಬಿತಾ ಇಂದ್ರ ರೆಡ್ಡಿ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.

ಈಗಷ್ಟೇ ಸಿಬಿಐ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಪಡೆದಿರುವ ಹಿರಿಯ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಅವರು ಸಚಿವೆ ಸಬಿತಾ ವಿರುದ್ಧ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

ಶ್ರೀಲಕ್ಷ್ಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಸ್ಪಷ್ಟವಾಗಿ ಅಂದಿನ ಗಣಿ ಇಲಾಖೆ ಸಚಿವೆ ಸಬಿತಾ ಅವರ ನಿರ್ದೇಶನದಂತೆ ಸರ್ಕಾರಿ ಆದೇಶ ಜಾರಿ ಮಾಡಿದೆ. ಓಎಂಸಿಗೆ ಲೈಸನ್ಸ್ ನೀಡುವುದರಲ್ಲಿ ನನ್ನ ಪಾತ್ರವೇನು ಇಲ್ಲ ನಾನು ಸರ್ಕಾರದ(ಅಂದಿನ ವೈಎಸ್ ರಾಜಶೇಖರ ರೆಡ್ಡಿ ಸರ್ಕಾರ) ಆಜ್ಞಾಪಾಲಕಿ ಅಷ್ಟೇ ಎಂದು ಪತ್ರದಲ್ಲಿ ಕೋರಿದ್ದರು.

ಸಿಬಿಐ ಕ್ಲೀನ್ ಚಿಟ್: ಸರ್ಕಾರ ಆದೇಶ ಪಾಲಿಸುವುದು ಐಎಎಸ್ ಅಧಿಕಾರಿಗಳ ಕರ್ತವ್ಯವಾದರೂ, GO(government Order) ತಡೆ ಹಿಡಿಯುವ ಅಧಿಕಾರವೂ ಇರುತ್ತದೆ. ಸುಮ್ಮನೆ ಸಚಿವೆ ಸಬಿತಾ ಮೇಲೆ ಆರೋಪಗಳನ್ನು ದೂಡುವ ಯತ್ನವನ್ನು ಶ್ರೀಲಕ್ಷ್ಮಿ ಮಾಡುತ್ತಿದ್ದಾರೆ ಎಂದು ಸಿಬಿಐ ಪರ ವಕೀಲರು ವಾದಿಸಿದರು.

ಸಿಬಿಐ ವಕೀಲರ ವಾದವನ್ನು ಮನ್ನಿಸಿದ ಕೋರ್ಟ್, ಸಬಿತಾಗೆ ಗುರುವಾರ(ಡಿ.1) ಕ್ಲೀನ್ ಚಿಟ್ ನೀಡಿತ್ತು. ಜಾಮೀನು ತೀರ್ಪು ಕಾಯ್ದಿರಿಸಲಾಗಿತ್ತು. ಶುಕ್ರವಾರ ಶ್ರೀಲಕ್ಷ್ಮಿಗೆ ಜಾಮೀನು ಮಂಜೂರಾಗಿದೆ.

English summary
Suspended IAS officier Y Srilakshmi gets conditional bail in illegal mining case. Srilakshmi is accused of helping Gali Janardhana Reddy's OMC. CBI also given clean chit to home minister Sabita Reddy. Earlier Srilakshmi was sent to judicial custody in to Chanchalguda jail till December 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X