ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ತನಿಖೆ ಲೋಕಾಯುಕ್ತ ಹೆಗಲಿಗೆ: ಗೌಡ ಫ್ಯಾಮಿಲಿ ಕಂಗಾಲು

By Srinath
|
Google Oneindia Kannada News

kpsc-krishna-case-handed-over-to-lokayukta-bng
ಬೆಂಗಳೂರು, ನ.7: 'ಲೋಕ ಸೇವಕ' ಡಾ. ಕೃಷ್ಣ ನಿವಾಸದಿಂದ ಭರ್ಜರಿ ದಾಖಲೆಗಳನ್ನು ಎತ್ತಿಹಾಕಿಕೊಳ್ಳುತ್ತಿದ್ದಂತೆ ಸಿಐಡಿ ಪೊಲೀಸರಿಗೆ ಇನ್ನು ಈ ಕೇಸನ್ನು ತಾವು ನಿರ್ವಹಿಸುವುದರಲ್ಲಿ ಅರ್ಥವಿಲ್ಲ ಎನಿಸಿದೆ. ಆಗ ತಕ್ಷಣ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ನೀವೇ ಕೇಸನ್ನು ಕೈಗೆತ್ತಿಕೊಳ್ಳಿ ಎಂದು ಪ್ರಕರಣವನ್ನು ಲೋಕಾಯುಕ್ತ ಕೋರ್ಟಿಗೆ ಒಪ್ಪಿಸಿದ್ದಾರೆ.

ಇದರಿಂದ 'ಲೋಕ ಸೇವಕ' ಡಾ. ಕೃಷ್ಣಗಿಂತ ಹೆಚ್ಚಾಗಿ ಖುದ್ದು ದೇವೇಗೌಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮೊದಲೇ, ಭ್ರಷ್ಟರ ವಿರುದ್ಧ ಲೋಕಾಯುಕ್ತ ಉರಿದುಬೀಳುತ್ತಿದ್ದೆ. ಅಂಥದ್ದರಲ್ಲಿ ಸಿಐಡಿ ಪೊಲೀಸರು ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಿ, ತಮಾಶೆ ನೋಡತೊಡಗಿದ್ದು ದೇವೇಗೌಡರಿಗೆ ಸಹಿಸಲಾಗಿಲ್ಲ. ಹೀಗಾಗಿ ಸಿಐಡಿ ಯಜಮಾನ ಶಂಕರಿ ಬಿದರಿ ವಿರುದ್ಧ ಗೌಡ ಫ್ಯಾಮಿಲಿ ಎಗರೆಗರಿ ಬೀಳ ತೊಡಗಿದೆ.

ಈ ಮಧ್ಯೆ, 'ಲೋಕ ಸೇವಕ' ಡಾ. ಕೃಷ್ಣರನ್ನು ಸಮಾಧಾನಪಡಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪದೇಪದೆ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟು, ಸಮಾಧಾನದ ಮಾತುಗಳನ್ನಾಡಿದ್ದಾರೆ. ಅಲ್ಲಿಂದ ವಾಪಸು ಬರುವಾಗ ಸೀದಾ ವಸಂತನಗರಕ್ಕೆ ತೆರಳಿ 'ಲೋಕ ಸೇವಕ' ಡಾ. ಕೃಷ್ಣ ಕುಟುಂಬದವರನ್ನೂ ಭೇಟಿ ಮಾಡಿ, ಸಮಾಧಾನ ಮಾಡುವ ನೈತಿಕ ಹೊಣೆ ಹೊತ್ತಿದ್ದಾರೆ.

ಇಷ್ಟಕ್ಕೆ ತೃಪ್ತರಾಗದ ದೊಡ್ಡಗೌಡರು ತಮ್ಮ ಕುಮಾರನ ಪರಮಾಪ್ತ ಗೆಣೆಕಾರ ಚಲುವರಾಯಸ್ವಾಮಿಯನ್ನೂ ಆಗಾಗ ಜೈಲಿಗಟ್ಟಿ, 'ಲೋಕ ಸೇವಕ' ಡಾ. ಕೃಷ್ಣ ಯೋಗಕ್ಷೇಮದ ರಿಪೋರ್ಟ್ ತರಿಸಿಕೊಂಡಿದ್ದಾರೆ. ಇದನ್ನೆಲ್ಲ ಕಣ್ಣಳತೆಯಲ್ಲೇ ಗಮನಿಸುತ್ತಿರುವ ಲೋಕಾಯುಕ್ತ ಎಸ್ಪಿ ಪಿಕೆ ಶಿವಶಂಕರ್ ಅವರು 'ಲೋಕ ಸೇವಕ'ನ ವಿರುದ್ಧ ಸರಿಯಾಗಿ ಕೇಸು ಜಡಿಯಲು ಎಲ್ಲ ಕಡೆಗಳಿಂದಲೂ ಮಾಹಿತ ಕಲೆಹಾಕುತ್ತಿದ್ದಾರೆ.

English summary
Following the raid on on KPSC Krishna's house in Vasanthnagar, the CID deemed it a fit case for the Lokayukta police to register a case under sections 13 (1) and 13 (2) of the Prevention of Corruption Act. Based on a written CID statement, the Lokayukta police filed an FIR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X