ಭ್ರಷ್ಟಾಚಾರ, ಕಪ್ಪುಹಣದ ಬಗ್ಗೆ ಸೋನಿಯಾ ಮೌನ: ಅಡ್ವಾಣಿಗೆ ಅರಳುಮರುಳು

ಎಐಸಿಸಿಯಲ್ಲಿ ಮಾತನಾಡಿದ್ದ ವೇಳೆ ಸೋನಿಯಾ ಭ್ರಷ್ಟಾಚಾರ ಮತ್ತು ಲೋಕಪಾಲ ಮಸೂದೆ ಕುರಿತು ಪ್ರಸ್ತಾಪಿಸಿದ್ದರು. ಅಡ್ವಾಣಿ ಇದನ್ನು ಮರೆತುಬಿಟ್ಟಿದ್ದಾರೆ. ವಯಸ್ಸಿನ ಭಾರದಿಂದಾಗಿ ಅಡ್ವಾಣಿ ಅವರಿಗೆ ಮರೆಗುಳಿತನ ಆವರಿಸಿರಬಹುದು ಎಂದು ಟ್ವಿಟ್ಟರ್ ನಲ್ಲಿ ಗೇಲಿ ಮಾಡಿದ್ದಾರೆ.
ತಾವು ನಡೆಸುತ್ತಿರುವ ಜನಚೇತನ ಯಾತ್ರೆ ಮುಂಬೈಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕ ಭಾಷಣ ಮಾಡಿದ ಅಡ್ವಾಣಿ, ಕಪ್ಪುಹಣ-ಭ್ರಷ್ಟಾಚಾರ-ಹಣದುಬ್ಬರಗಳ ಕುರಿತು ಮಾತನಾಡುವಂತೆ ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದ್ದರು.












Click it and Unblock the Notifications