ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಯಿಂದ RSS ಗೆ ಆದ 'ಲಾಭ' ಏನು ಗೊತ್ತಾ !

|
Google Oneindia Kannada News

BSY
ಬೆಂಗಳೂರು ನ 3: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಾಲು ಸಾಲು ಹಗರಣಗಳಿದ್ದರೂ ದೇಶಭಕ್ತ ಸಂಘಟನೆಯೆಂದು ತಮ್ಮನ್ನು ಬಿಂಬಿಸಿ ಕೊಳ್ಳುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಸಂಘಪರಿವಾರದವರು ಸುಮ್ಮನೆ ಇರುವುದಕ್ಕೆ ಕಾರಣ ಬಟಾಬಯಲಾಗಿದೆ. ಯಡಿಯೂರಪ್ಪ ಅವರ ಅಕ್ರಮ ನಿವೇಶನ ಹಂಚಿಕೆಯಲ್ಲಿ ಸಂಘಪರಿವಾರದವರೂ ಪಾಲುದಾರರು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಯಡಿಯೂರಪ್ಪ ಅಕ್ರಮ ಹಗರಣದ ಬಗ್ಗೆ ಕಿವಿಹಿಂಡಿ ಬುದ್ದಿ ಹೇಳಬೇಕಾಗಿದ್ದ ಆರ್ಎಸ್ಎಸ್ ಮುಖಂಡರು ತಮ್ಮ ಮುಖಕ್ಕೂ ಮಸಿ ಮೆತ್ತಿ ಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನದಂತ ಜಾಗವನ್ನು ಜುಜುಬಿ ಲಕ್ಷ ರೂಪಾಯಿಗೆ ಮಾರಿದ್ದಾರೆ. ಹೀಗಿರುವಾಗ ತಮಗಾದ ಲಾಭದಿಂದ ಸಂಘಪರಿವಾರದ ಮುಖಂಡರು ಬಿಎಸ್ವೈ ಅವರನ್ನು ಹೇಗೆ ತರಾಟೆಗೆ ತೆಗೆದು ಕೊಳ್ಳಲಾಗುತ್ತೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪ ಅವರ ಮೇಲೆ ಇಷ್ಟೊಂದು ಆರೋಪಗಳಿದ್ದರೂ ಆರ್ಎಸ್ಎಸ್ ಮುಖಂಡರು ಯಾಕೆ ತುಟಿ ಬಿಚ್ಚುತ್ತಿಲ್ಲ. ಮಾತೆದಿದ್ದರೆ ಕೇಶವಕೃಪಾ ದೌಡಾಯಿಸುವ ಬಿಜೆಪಿ ನಾಯಕರಿಗೆ ಯಾವ ಮುಖದಿಂದ ಬುದ್ದಿವಾದ ಹೇಳುತ್ತಾರೆ? ಕೋಟಿ ಕೋಟಿ ಮೌಲ್ಯದ ವಾಣಿಜ್ಯ ಭೂಮಿಯನ್ನು ತಮ್ಮ ಆರು ಅಂಗ ಸಂಸ್ಥೆಗಳಿಗೆ ಮಂಜೂರು ಮಾಡಿಸಿ ಕೊಳ್ಳುತ್ತಾರಲ್ಲಾ ಇಂತಹ ಸಂಘಟನೆಗಳಿಗೆ ನೀತಿ ಪಾಠ ಹೇಳುವ ನೈತಿಕ ಹಕ್ಕು ಇದೆಯಾ ಎಂದು ಸಿದ್ದು ಪ್ರಶ್ತ್ನಿಸಿದ್ದಾರೆ.

ಸಂಘಪರಿವಾರದ ರಾಷ್ಟ್ರೋತ್ಪನ್ನ ಪರಿಷತ್ ಹೆಸರೂ ಪಟ್ಟಿಯಲ್ಲಿದೆ. ಇಷ್ಟೆಲ್ಲಾ ಯಡಿಯೂರಪ್ಪ ಅವರಿಂದ ಲಾಭವಾದ ಮೇಲೆ ಸಂಘಪರಿವಾರದ ಮುಖಂಡರು ಅವರ ಭ್ರಷ್ಟಾಚಾರ ನೋಡಿ ಸುಮ್ಮನಿರದೆ ಇನ್ನೇನು ಮಾಡಲು ಸಾಧ್ಯವೆಂದು ಸಿದ್ದರಾಮಯ್ಯ ಹಾಸ್ಯ ಮಾಡಿದ್ದಾರೆ.

English summary
Opposition leader Siddaramaiah criticized RSS, he said Sanghaparivar benefited from former CM Yaeddyurappa. Residential and Commercial plot has been allotted to the RSS leader and their sister firms for a nominal amount.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X