ಭರ್ಜರಿ ಕೊಡುಗೆ ಸಿಕ್ಕರೂ ನೌಕರರಿಗೆ ಅಸಮಾಧಾನ

ಈ ಕೊಡುಗೆ ಸರಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ, ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಿಗೆ, ನಿವೃತ್ತ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ಅನ್ವಯವಾಗುತ್ತದೆ.
ಸರಕಾರಿ ನೌಕರರಿಗೆ ಇದು ಬಹುದಿನದ ಬೇಡಿಕೆಯಾಗಿತ್ತು. ಅವರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಒಂದು ಅಧಿಕೃತ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ವರದಿಯನ್ನು ಸಲ್ಲಿಸುವ ಮೊದಲೇ ರಾಜ್ಯೋತ್ಸವದಂದು ಈ ಕೊಡುಗೆಯನ್ನು ಪ್ರಕಟಿಸಿದೆ.
ಆದರೂ ಅಸಮಾಧಾನ : ಈ ವೇತನ ಪರಿಷ್ಕರಣೆ ಸರಕಾರಿ ನೌಕರರಿಗೆ ಎಳ್ಳಷ್ಟೂ ಸಮಾಧಾನ ತಂದಿಲ್ಲ. ಈ ಕುರಿತಂತೆ ನ.3ರಂದು ಸದಾನಂದ ಗೌಡರ ಜೊತೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಭೈರಪ್ಪ ಚರ್ಚೆ ನಡೆಸಲಿದ್ದಾರೆ. ಚರ್ಚೆಯ ನಂತರ ಮುಷ್ಕರ ಹೂಡುವುದೋ ಬೇಡವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.












Click it and Unblock the Notifications