ತಮಿಳು ಚಿತ್ರ ಪ್ರದರ್ಶನಕ್ಕೆ ಕರವೇಯಿಂದ ಅಡ್ಡಿ

ನಟ ವಿಜಯ್ ನಾಯಕತ್ವದ 'ವೇಲಾಯುಧಂ' ದೀಪಾವಳಿಯಂದೇ ಬಿಡುಗಡೆ ಆಗಿದೆ. ಸೂರ್ಯ ನಾಯಕತ್ವದ ತಮಿಳು ಚಿತ್ರ '7 ಅಮ್ ಅರಿವು' ಹಾಗೂ ಹಿಂದಿ ಚಿತ್ರ 'ರಾ ಒನ್' ಕೂಡ ಅದೇ ದಿನ ಬಿಡುಗಡೆಯಾಗಿವೆ. ಕನ್ನಡದ ಒಂದೇ ಒಂದು ಚಿತ್ರವೂ ಕೂಡ ದೀಪಾವಳಿಯ ದಿನ ಬಿಡುಗಡೆ ಆಗಿಲ್ಲ. ಪರಭಾಷೆ ಚಿತ್ರ ಚಿತ್ರಗಳನ್ನು ನೋಡಿಯೇ ಕನ್ನಡಿಗರ ದೀಪಾವಳಿ ಮುಗಿದಿದೆ.
ಆದರೆ ಇಂದು ಕನ್ನಡ ರಾಜ್ಯೋತ್ಸವ. ಕನ್ನಡ ಅಭಿಮಾನ ಎಲ್ಲರಿಗೂ ಉಕ್ಕಿ ಹರಿಯುವ ದಿನ. ಇದೇ ದಿನಕ್ಕಾಗಿ ಕಾದು ಕುಳಿತಿದ್ದರು ಎನ್ನುವಂತೆ ಇಂದು ದಾಳಿ ನಡೆಸಲಾಗಿದೆ. ಅಂದರೆ, ರಾಜ್ಯೋತ್ಸವದಂದು ಮಾತ್ರ 'ಕನ್ನಡಪ್ರೇಮ' ಕನ್ನಡಿಗರಿಗೆ ಜಾಗೃತವಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯವರು ಈ ಮೂಲಕ ಕರೆಕೊಟ್ಟಿರಬಹುದೇ?












Click it and Unblock the Notifications