ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಪಾತದ ಬನ್ನೂರಮಠ ಲೋಕಾಯುಕ್ತರಾಗುವುದು ಬೇಡ್ವೇ ಬೇಡ: ಖಾಸಗಿ ದೂರು

By Srinath
|
Google Oneindia Kannada News

dont-appoint-bannur-matt-as-lokayukta-complaint
ಬೆಂಗಳೂರು, ಅ.28: ಲೋಕಾಯುಕ್ತ ಹುದ್ದೆಗೆ ಶಿಫಾರಸುಗೊಂಡಿರುವ ನ್ಯಾ. ಎಸ್‌.ಆರ್‌. ಬನ್ನೂರಮಠ ಅವರ ವಿರುದ್ಧ ರಾಜ್ಯಪಾಲರಿಗೆ ಆಗಲೇ ದೂರುಗಳು ಸಲ್ಲಿಕೆಯಾಗತೊಡಗಿವೆ. ಭೂಕಬಳಿಕೆ 'ಭೂ'ತವನ್ನು ಬೆನ್ನಿಗೇರಿಸಿಕೊಂಡಿರುವುದಷ್ಟೇ ಅಲ್ಲ ನ್ಯಾ. ಬನ್ನೂರಮಠ ಮಹಾಣ್ ಪಕ್ಷಪಾತಿ. ಆದ್ದರಿಂದ ಅವರನ್ನು ಲೋಕಾಯುಕ್ತ ಹುದ್ದೆಗೆ ಪರಿಗಣಿಸಲೇ ಬೇಡಿ ಎಂದು ಜೆಡಿಎಸ್ ಅಲವತ್ತುಕೊಂಡಿದೆ.

ಕುತೂಹಲದ ಸಂಗತಿಯೆಂದರೆ, ರಾಜ್ಯ ಸರ್ಕಾರ ಬನ್ನೂರಮಠ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವ ಮುನ್ನವೇ ಅಂದರೆ, ಅ. 23ರಂದೇ ಜೆಡಿಎಸ್‌ನ ಮಾಜಿ ಶಾಸಕ ಶಿವಶಂಕರ್ ಈ ದೂರನ್ನು ಸಲ್ಲಿಸಿದ್ದಾರೆ.

'ಬನ್ನೂರಮಠ ಅವರು ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ತೀರ್ಪು ನೀಡುವಾಗ ತಾರತಮ್ಯ ಎಸಗುತ್ತಿದ್ದರು. ಇಂತಹವರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬಾರದು' ಎಂದು ಶಿವಶಂಕರ್ ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ಅವರಿಗೆ ದೂರು ನೀಡಿದ್ದಾರೆ.

ನ್ಯಾಯಮೂರ್ತಿಗಳಾಗಿದ್ದಾಗ ಒಂದೇ ರೀತಿಯ ಎರಡು ಪ್ರಕರಣಗಳಲ್ಲಿ ಭಿನ್ನ ತೀರ್ಪು ನೀಡುವ ಮೂಲಕ ಬನ್ನೂರಮಠ ಅವರು ತಾರತಮ್ಯ ಧೋರಣೆ ತೋರಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

English summary
Dont appoint Justice SR Bannur Matt as the new Lokayukta for Karnataka pleads JDS ex-MLA Shiv Shankar to Governor HR Bhardwaj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X