ಪಾರ್ಕ್ ಜಾಗದಲ್ಲಿ ಮನೆ: ಇದ್ಯಾವ ನ್ಯಾಯ ನ್ಯಾ. ಬನ್ನೂರಮಠರೇ?

ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಜಮೀನು ಒತ್ತುವರಿ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎ.ಟಿ. ರಾಮಸ್ವಾಮಿ ಅವರು 'ಕಾನೂನು ಪ್ರಕಾರ ನ್ಯಾಯಮೂರ್ತಿಗಳು ಈ ಬಡಾವಣೆಯಲ್ಲಿ ನಿವೇಶನವನ್ನೇ ಖರೀದಿಸುವಂತಿಲ್ಲ. ಏಕೆಂದರೆ, ಈ ಬಡಾವಣೆ ನಿರ್ಮಾಣವಾಗಿರುವುದು ನ್ಯಾಯಾಂಗ ಇಲಾಖೆ ನೌಕರರಿಗೆ ನಿವೇಶನ ಒದಗಿಸಲು ಮಾತ್ರ' ಎನ್ನುತ್ತಾರೆ.
'ನ್ಯಾಯಾಧೀಶರು ನ್ಯಾಯಾಂಗ ಇಲಾಖೆಯ ನೌಕರರಲ್ಲ. ವಾಸ್ತವವಾಗಿ ಅವರು ಸಂವಿಧಾನ ನಿಯೋಜಿತ ಪ್ರತಿನಿಧಿಗಳು. ಇಂತಹ ಉನ್ನತ ಸ್ಥಾನದಲ್ಲಿರುವವರು ನೌಕರರಿಗೆ ನೀಡಬೇಕಾದ ನಿವೇಶನವನ್ನು ಪಡೆದುಕೊಳ್ಳುವುದು ಕಾನೂನು ದೃಷ್ಟಿಯಿಂದ ಸರಿಯಲ್ಲ ' ಎಂದೂ ಅವರು ವಿವರಿಸುತ್ತಾರೆ.












Click it and Unblock the Notifications