ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರ್ಕ್ ಜಾಗದಲ್ಲಿ ಮನೆ: ಇದ್ಯಾವ ನ್ಯಾಯ ನ್ಯಾ. ಬನ್ನೂರಮಠರೇ?

By Srinath
|
Google Oneindia Kannada News

land-scam-sr-bannur-matt-not-justifiable
ಬೆಂಗಳೂರು, ಅ.28: 'ನಮ್ಮ ದಾಖಲೆಗಳ ಪ್ರಕಾರ ಬನ್ನೂರಮಠ ಅವರಿಗೆ ಹಂಚಿಕೆಯಾಗಿರುವ ನಿವೇಶನ (2118-ಎ)ವು ವಾಸ್ತವವಾಗಿ ಉದ್ಯಾನವನಕ್ಕಾಗಿ ಮೀಸಲಿಟ್ಟ ಪ್ರದೇಶ. ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಾದ ಪ್ರದೇಶವನ್ನು ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ' ಎನ್ನುತ್ತಿದ್ದಾರೆ ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಜಮೀನು ಒತ್ತುವರಿ ಕುರಿತ ಜಂಟಿ ಸದನ ಸಮಿತಿಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು!

ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಜಮೀನು ಒತ್ತುವರಿ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎ.ಟಿ. ರಾಮಸ್ವಾಮಿ ಅವರು 'ಕಾನೂನು ಪ್ರಕಾರ ನ್ಯಾಯಮೂರ್ತಿಗಳು ಈ ಬಡಾವಣೆಯಲ್ಲಿ ನಿವೇಶನವನ್ನೇ ಖರೀದಿಸುವಂತಿಲ್ಲ. ಏಕೆಂದರೆ, ಈ ಬಡಾವಣೆ ನಿರ್ಮಾಣವಾಗಿರುವುದು ನ್ಯಾಯಾಂಗ ಇಲಾಖೆ ನೌಕರರಿಗೆ ನಿವೇಶನ ಒದಗಿಸಲು ಮಾತ್ರ' ಎನ್ನುತ್ತಾರೆ.

'ನ್ಯಾಯಾಧೀಶರು ನ್ಯಾಯಾಂಗ ಇಲಾಖೆಯ ನೌಕರರಲ್ಲ. ವಾಸ್ತವವಾಗಿ ಅವರು ಸಂವಿಧಾನ ನಿಯೋಜಿತ ಪ್ರತಿನಿಧಿಗಳು. ಇಂತಹ ಉನ್ನತ ಸ್ಥಾನದಲ್ಲಿರುವವರು ನೌಕರರಿಗೆ ನೀಡಬೇಕಾದ ನಿವೇಶನವನ್ನು ಪಡೆದುಕೊಳ್ಳುವುದು ಕಾನೂನು ದೃಷ್ಟಿಯಿಂದ ಸರಿಯಲ್ಲ ' ಎಂದೂ ಅವರು ವಿವರಿಸುತ್ತಾರೆ.

English summary
Justice SR Bannur Matt may not be the new Lokayukta for Karnataka as the Justice is embroiled in land scam. But his involment in the case is unpardonable and not justifiable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X