ಇದೋ ನನ್ನ ಸ್ಪಷ್ಟನೆ, ಭ್ರಷ್ಟರಿಗೆ ನೀಡ್ಬೇಡಿ ರಕ್ಷಣೆ

ಪ್ರೆಸ್ ಕ್ಲಬ್ ನಲ್ಲಿ ಮಧ್ನಾಹ್ನ ಸುಮಾರು 3 ಗಂಟೆಗೆ ಪ್ರತಿಕಾಗೋಷ್ಠಿ ನಡೆಸಿದ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತನಾಗಿ ನಿಷ್ಠೆಯಿಂದ ಕರ್ತವ್ಯ ನಿಭಾಯಿಸಿದ್ದೇನೆ. ಆರೋಪ ಹೊತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಶಿಫಾರಸ್ಸು ಮಾಡುವ ಅಧಿಕಾರ ಲೋಕಾಯುಕ್ತ ಸಂಸ್ಥೆಗಿದೆ ಎಂದರು.
* ಲೋಕಾಯುಕ್ತ ಕಾಯ್ದೆ 17(ಎ) ಪ್ರಕಾರ ಸಚಿವರು, ಶಾಸಕರನ್ನು ತನಿಖೆಗೆ ಒಳಪಡಿಸಬಹುದು. ಜನಾರ್ದನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಅವರು ವಿಚಾರಣಾತೀತರಾಗಲು ಸಾಧ್ಯವಿಲ್ಲ.
* ಗಣಿ ಅಕ್ರಮದ ಬಗ್ಗೆ ನೀಡಿರುವ ಎಲ್ಲಾ ದಾಖಲೆಗಳು ಸಮರ್ಪಕವಾಗಿದ್ದು, ಲೋಕಾಯುಕ್ತ ಕಾಯ್ದೆಗೆ ಅನುಗುಣವಾಗಿದೆ.
* ತನಿಖಾ ವರದಿ ತಯಾರಿಸುವಾಗ ಅಥವಾ ಆರೋಪಿಗಳ ವಜಾ ಮಾಡುವಂತೆ ಶಿಫಾರಸ್ಸು ಮಾಡುವ ಮುನ್ನ ನೋಟಿಸ್ ನೀಡುವ ಅವಶ್ಯಕತೆ ಇಲ್ಲ.
ಅಕ್ರಮ ಗಣಿಗಾರಿಕೆಯ ಕುರಿತು ಲೋಕಾಯುಕ್ತರು ಸರಕಾರಕ್ಕೆ ಸಲ್ಲಿಸಿ ರುವ ವರದಿಯಲ್ಲಿ ಅಧಿಕಾರೇತರ ವ್ಯಕ್ತಿ (ಶಾಸಕರು, ಸಚಿವರು)ಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವ ಅಧಿಕಾರದ ಕುರಿತು ಪ್ರಶ್ನಿಸಲಾಗಿದೆ. ಇದಕ್ಕೆ ಸಮರ್ಪಕ ಉತ್ತರ ನೀಡಿದ್ದೇನೆ.
ವರದಿಯನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವ ಅಧಿಕಾರ ಸಚಿವ ಸಂಪುಟಕ್ಕಿದೆ. ಶಿಫಾರಸು ಮಾಡುವುದು ನಮ್ಮ ಕರ್ತವ್ಯ ಎಂದು ಸಂತೋಷ್ ಹೆಗ್ಡೆ ಪುನರುಚ್ಚರಿಸಿದರು.












Click it and Unblock the Notifications