ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತರು ಕಾಲಿಟ್ಟ ಕಡೆ ಹೊನ್ನು ಸುರಿತ್ತದೆ: ಈಶ್ವರಪ್ಪ

By Mahesh
|
Google Oneindia Kannada News

KS Eshwarappa
ಬೆಂಗಳೂರು, ಅ.11: ಬಿಜೆಪಿ ಎಂದರೆ ಮಡಿವಂತಿಕೆ ಪಕ್ಷ, ಬ್ರಾಹ್ಮಣರ ಪಕ್ಷ ಎಂದೆಲ್ಲ ಅಪಪ್ರಚಾರ ಮಾಡಲಾಗುತ್ತದೆ. ಅದೆಲ್ಲ ಸುಳ್ಳು. ಬಿಜೆಪಿ ಎಂದರೆ ಎಲ್ಲ ಜಾತಿ ಜನಾಂಗದ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ದಲಿತರು ದೇಗುಲ ಪ್ರವೇಶ ಮಾಡಿದರೆ ಪಾಪ ಬರುವುದಿಲ್ಲ, ಮೈಲಿಗೆ ಆಗುವುದಿಲ್ಲ, ದಲಿತರು ಕಾಲಿಟ್ಟ ಕಡೆ ಹೊನ್ನು ಸುರಿಯುತ್ತದೆ. ನೆಲ ಜಲ ಶುದ್ಧವಾಗಿರುತ್ತದೆ. ಪುಣ್ಯ ಬರುತ್ತದೆ. ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಎಂದು ಜಾತಿ ರಾಜಕಾರಣ, ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಿಲ್ಲ. ಮುಸ್ಲಿಮರು ಕಾಂಗ್ರೆಸ್ ನ ಆಸ್ತಿ ಎಂದು ಆ ಪಕ್ಷ ಅಂದುಕೊಂಡಿದೆ. ಮತದಾರರ ಓಲೈಕೆಗೆ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯುವುದು ಆ ಪಕ್ಷದ ಸಿದ್ಧಾಂತ ನಮಗೆ ಅಂಥ ದುರ್ಗತಿ ಬಂದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ದೊಡ್ಡ ದುರಂತ : ಅಂಬೇಡ್ಕರ್ ಅವರನ್ನು ದಲಿತರಿಗೆ, ಬಸವಣ್ಣ ಅವರನ್ನು ಲಿಂಗಾಯಿತರಿಗೆ, ಕನಕದಾಸರನ್ನು ಕುರುಬರಿಗೆ, ಶಂಕರಾಚಾರ್ಯರನ್ನು ಬ್ರಾಹ್ಮಣರಿಗೆ ಸೀಮಿತ ಮಾಡುತ್ತಿರುವುದು ದೊಡ್ಡ ದುರಂತ ಎಂದು ಈಶ್ವರಪ್ಪ ಅವರು ಆದಿ ಕವಿ, ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಸಮಾರಂಭದಲ್ಲಿ ಹೇಳಿದರು.

English summary
If any dalit enters a temple it is not taboo, it will bring good to whole community. BJP is the only party to have leaders from all caste and community unlike congress which pretends to be secularist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X