ಆಕೆ ಕೊಂಡ ಹೊಸ ಕಾರಿನ ರಿಬ್ಬನ್ ಕೂಡ ಕತ್ತರಿಸಿರಲಿಲ್ಲ!

ಈ ಅನ್ಯಾಯದ ಮತ್ತು ವಿನಾಕಾರಣ ಆದ ಕೊಲೆಯನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರಲ್ಲಿನ ಶಿಸ್ತು, ಶ್ರದ್ಧೆ, ಒಳ್ಳೆಯತನ... ಅವರನ್ನು ಕಳೆದುಕೊಂಡ ಬಂಧುಗಳಿಗೆ, ಸ್ನೇಹಿತರಿಗೆ ಮತ್ತಷ್ಟು ದುಃಖ ತಂದಿದೆ.
ಆಯುಧ ಪೂಜೆಯ ದಿನ ಅವರಿಂದಲೇ ಪೂಜೆಗೊಳಗಾಗಿ ಸಂಭ್ರಮಿಸಿದ ಹೊಸದಾಗಿ ಕೊಂಡ ಕಾರಿನ ರಿಬ್ಬನ್ ಕೂಡ ಕಟ್ ಮಾಡಿರಲಿಲ್ಲ. ಅಷ್ಟರಲ್ಲೇ ಅವರ ಜೀವನಾಡಿಯನ್ನೇ ದುರುಳ ಸೆಕ್ಯೂರಿಟ್ ಗಾರ್ಡ್ ನೊಬ್ಬ ಕತ್ತರಿಸಿಹಾಕಿಬಿಟ್ಟ.
ವಿಜಯದಶಮಿ ಹಿಂದಿನ ದಿನ ಸಂಭ್ರಮದಿಂದ ಪೋಲೋ ಗಾರ್ಡ್ ಅಪಾರ್ಟ್ ಮೆಂಟಿನ ಫ್ಲಾಟಿನಲ್ಲಿ ಆಯುಧ ಪೂಜೆ ಮಾಡಿದ್ದ ಅನುಸೂಯ ಬಂಧುಮಿತ್ರರಿಗೆ ಸಂತಸದಿಂದಲೇ ಸಿಹಿಯನ್ನೂ ಹಂಚಿದ್ದರು. ಆದರೆ, ಇಂದು ಅವರನ್ನು ಬಲ್ಲ ಎಲ್ಲರಲ್ಲಿಯೂ ಕಹಿಯನ್ನು ಉಳಿಸಿ ಬಹುದೂರ ಸಾಗಿಬಿಟ್ಟಿದ್ದಾರೆ.
ಹತ್ಯೆಯಾಗಿ ಕೆಲ ಗಂಟೆಗಳವರೆಗೆ ಹೃದಯಬೇನೆಯಿಂದ ನರಳುತ್ತಿರುವ 70 ವರ್ಷದ ಅವರ ತಾಯಿಗೆ ಮಗಳು ಸತ್ತಿರುವುದು ತಿಳಿದಿರಲಿಲ್ಲ. ಹಿರಿಮನಸ್ಸಿನ ಹೃದಯ ನಿಂತೇಹೋದೀತೆಂದು ನೆರೆಹೊರೆಯವರು ಅವರ ತಾಯಿಗೆ ತಿಳಿಸಲು ಹಿಂದೇಟು ಹಾಕಿದ್ದರು.
ನಾಲ್ಕು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಶ್ರಫ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಹತ್ಯೆ ಆಗಿದ್ದು ಯಾಕೆ? ಉದ್ದೇಶಪೂರ್ವಕವೆ? ಅಕಸ್ಮಾತಾಗಿ ಆಗಿಹೋಯಿತೆ? ಕೊಲೆಯ ಜಾಡುಹಿಡಿದಿರುವ ಪೊಲೀಸರು ಈ ಚಿದಂಬರ ರಹಸ್ಯವನ್ನು ಬಿಡಿಸಬೇಕಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications