ಬಳ್ಳಾರಿಯಲ್ಲಿ ಸಿಬಿಐ ದಾಳಿ ನಡೆದಿಲ್ಲ : ಜಿಂದಾಲ್ ಸ್ಟೀಲ್ಸ್ !

JSW Steel denies CBI raid
ಬಳ್ಳಾರಿ/ಮುಂಬೈ, ಅ.4: ಬಳ್ಳಾರಿಯ ವಿಜಯನಗರ ಉಕ್ಕು ಘಟಕದ ಮೇಲೆ ಸಿಬಿಐ ದಾಳಿ ನಡೆದಿರುವ ಸುದ್ದಿ ಸುಳ್ಳು ಎಂದು ದೇಶದ ಮೂರನೇ ಅತಿದೊಡ್ಡ ಉಕ್ಕು ಉತ್ಪಾದನಾ ಸಂಸ್ಥೆ ಜೆಎಸ್ ಡಬ್ಲ್ಯೂ ಸ್ಟೀಲ್ಸ್ ಮುಂಬೈ ಷೇರುಪೇಟೆಯಲ್ಲಿ ಪ್ರಕಟಿಸಿದೆ.

ಆದರೆ, ಸಿಬಿಐ ತಂಡ ವಿಜಯನಗರ ಘಟಕಕ್ಕೆ ಭೇಟಿ ಕೊಟ್ಟು ಕಬ್ಬಿಣ ಅದಿರು ಸಂಬಂಧಿಸಿದ ಕೆಲ ಮಾಹಿತಿಗಳನ್ನು ಕೇಳಿ ಪಡೆದುಕೊಂಡು ಹೋದರು. ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ ಎಂದು ಜಿಂದಾಲ್ ಸ್ಟೀಲ್ಸ್ ಸ್ಪಷ್ಟಪಡಿಸಿದೆ.

ರೆಡ್ಡಿಗಳಿಂದ ಅದಿರು ಪಡೆದಿದ್ದು ನಿಜ, ಆದ್ರೆ: ಉಕ್ಕು ಕಾರ್ಖಾನೆಗೆ ಅಗತ್ಯವಾದ ಕಬ್ಬಿಣದ ಅದಿರನ್ನು ನಾನಾ ಮೂಲಗಳಿಂದ ಸಂಗ್ರಹಿಸಲಾಗುತ್ತದೆ. ಅದರೆ ಎಲ್ಲಕ್ಕೂ ಅಗತ್ಯ ಲೆಕ್ಕ ಇಡಲಾಗಿದೆ. ಪೂರಕ ದಾಖಲೆಗಳಿವೆ. ರೆಡ್ಡಿಗಳ ಕಂಪನಿಯಿಂದ ಕೂಡಾ ಇದೇ ರೀತಿ ಅದಿರನ್ನು ಪಡೆಯಲಾಗಿದೆ ಅದಕ್ಕೆ ತಕ್ಕ ಮೌಲ್ಯವನ್ನು ನೀಡಲಾಗಿದೆ.

ಜೆಎಸ್ ಡಬ್ಲ್ಯೂ ಸ್ಟೀಲ್ಸ್ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಕಂಪನಿ ಬಗ್ಗೆ ಉಲ್ಲೇಖಿಸಲಾಗಿರುವ ಮಾಹಿತಿ ಅಷ್ಟು ಸುಳ್ಳು ಎಂದು ಜಿಂದಾಲ್ ಸ್ಟೀಲ್ಸ್ ಹೇಳಿಕೊಂಡಿದೆ.

ಆದರೆ, ವಿಶ್ವದಲ್ಲೇ ಅತಿ ಕಡಿಮೆ ಮೌಲ್ಯದಲ್ಲಿ ಉಕ್ಕು ಉತ್ಪಾದಿಸುವ ಜಿಂದಾಲ್ ಗ್ರೂಪ್ ನ ಷೇರು ಖರೀದಿ, ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯುವಂತೆ ಹೂಡಿಕೆದಾರರಿಗೆ ಆರ್ಥಿಕ ತಜ್ಞರು ಸೂಚಿಸಿರುವುದು ಕಂಪನಿಗೆ ಕೊಂಚ ಹಿನ್ನೆಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+